ಹೊಸಹಳ್ಳಿಯ ಬಾಲಗಂಗಾಧರನಾಥ ಮೆಟ್ರೊ ನಿಲ್ದಾಣದ ಬಳಿ ವಾಸ್ತವ್ಯ ಹೂಡಿದ್ದ ಬಲೂನ್ ವ್ಯಾಪಾರಿಗಳ ಕುಟುಂಬಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮದ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು. ಈ ಕುಟುಂಬಗಳ ಸದಸ್ಯರು ಮೆಟ್ರೊ ನಿಲ್ದಾಣದ ಪರಿಸರದ ಸ್ವಚ್ಛತೆಗೆ ಧಕ್ಕೆ ಉಂಟು ಮಾಡುತ್ತಿದ್ದರು. ಇಲ್ಲೇ ಆಡಿಕೊಂಡಿರುತ್ತಿದ್ದ ಪುಟ್ಟ ಮಕ್ಕಳು ವಾಹನ ನಿಬಿಡ ರಸ್ತೆಗೆ ಓಡಿಬರುತ್ತಿದ್ದರು ಎಂದು ಸಿಬ್ಬಂದಿ ತಿಳಿಸಿದ್ದಾರೆ