ADVERTISEMENT

ದೇವಸ್ಥಾನದ ಹುಂಡಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 20:40 IST
Last Updated 28 ಜೂನ್ 2017, 20:40 IST

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಹಳೇ ನಿಜಗಲ್ ಬೆಟ್ಟದ ತಪ್ಪಲಿನಲ್ಲಿರುವ ಉದ್ಧಾನ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ಮಂಗಳವಾರ  ರಾತ್ರಿ ನುಗ್ಗಿದ ಕಳ್ಳರು, ಎರಡು ಹುಂಡಿಗಳನ್ನು ಒಡೆದು ಹಣ ದೋಚಿದ್ದಾರೆ.

ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಸ್ಥಾನದ ಹುಂಡಿಗಳಲ್ಲಿ  ಸುಮಾರು ₹4 ಲಕ್ಷ ಸಂಗ್ರಹವಾಗಿತ್ತು.

ಮೊದಲು ದೇವಸ್ಥಾನದ ಕಬ್ಬಿಣದ ಬಾಗಿಲು ಮುರಿಯಲು ಯತ್ನಿಸಿರುವ ಕಳ್ಳರು, ಸಾಧ್ಯವಾಗದಿದ್ದಾಗ ಕಿಟಕಿ ಕಂಬಿ  ಮುರಿದು ಒಳನುಗ್ಗಿ ಹುಂಡಿ ಹಣ ದೋಚಿದ್ದಾರೆ.

ADVERTISEMENT

‘ಈ ದೇವಸ್ಥಾನದಲ್ಲಿ ಕಳ್ಳತನವಾಗುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ನಾಲ್ಕು ಬಾರಿ ಕಳ್ಳತನವಾಗಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.