ಬೆಂಗಳೂರು: ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಮರಿಸ್ವಾಮಿ (27) ಎಂಬವರ ಅಂಗಾಂಗಗಳನ್ನು ಶುಕ್ರವಾರ ದಾನ ಮಾಡಲಾಗಿದೆ.
ಮರಿಸ್ವಾಮಿ ಮದ್ದೂರು ಹೊನ್ನಲಗೆರೆ ಗ್ರಾಮದ ನಿವಾಸಿ. ಕೆಲಸ ಮುಗಿಸಿ ಜುಲೈ 19ರಂದು ಮನೆಗೆ ಬರುತ್ತಿದ್ದಾಗ ಬಸ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎರಡು ದಿನಗಳ ಬಳಿಕ ಅವರ ಮಿದುಳು ನಿಷ್ಕ್ರೀಯಗೊಂಡಿತ್ತು. ಪೋಷಕರ ಒಪ್ಪಿಗೆಯ ಮೇರೆಗೆ ಅವರ ಕಿಡ್ನಿ, ಪಿತ್ತಜನಕಾಂಗ ಹಾಗೂ ಕಣ್ಣು ದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.