ADVERTISEMENT

ಪಾತಾಳ ಗಂಗೆ ಯೋಜನೆ; 15ರಂದು ತಜ್ಞರ ಸಭೆ: ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಮೇ 2017, 19:56 IST
Last Updated 11 ಮೇ 2017, 19:56 IST
ಪಾತಾಳ ಗಂಗೆ ಯೋಜನೆ; 15ರಂದು ತಜ್ಞರ ಸಭೆ: ಪಾಟೀಲ
ಪಾತಾಳ ಗಂಗೆ ಯೋಜನೆ; 15ರಂದು ತಜ್ಞರ ಸಭೆ: ಪಾಟೀಲ   

ಕಲಬುರ್ಗಿ: ‘ಪಾತಾಳ ಗಂಗೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ 15ರಂದು ಬೆಂಗಳೂರಿನಲ್ಲಿ ತಜ್ಞರು ಮತ್ತು ಪರಿಸರವಾದಿಗಳ ಜತೆ ಸಭೆ ನಡೆಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾತಾಳ ಗಂಗೆ ಯೋಜನೆ ಬಗ್ಗೆ ತಪ್ಪು ಸಂದೇಶ ರವಾನೆಯಾಗಿದೆ. ಈ ಯೋಜನೆ ಬಗ್ಗೆ ಕೆಲವು ಪರಿಸರವಾದಿಗಳು ಮತ್ತು ತಜ್ಞರು ನನಗೆ ಪತ್ರ ಬರೆದು, ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT