ADVERTISEMENT

ಬಿಬಿಎಂಪಿ ಸಭೆ ಮುಂದಕ್ಕೆ

ಪಾಲಿಕೆ ಸದಸ್ಯೆ ಲಲಿತಾ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 19:39 IST
Last Updated 27 ನವೆಂಬರ್ 2014, 19:39 IST

ಬೆಂಗಳೂರು: ಗುರುವಾರ ನಡೆಯ ಬೇಕಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್‌ ಸಭೆಯನ್ನು ಗಿರಿನಗರ ವಾರ್ಡ್‌ ಸದಸ್ಯೆಯಾಗಿದ್ದ ಎಚ್‌.ಎಸ್‌. ಲಲಿತಾ ಅವರು ನಿಧನ ಹೊಂದಿದ್ದರಿಂದ ಶುಕ್ರವಾರಕ್ಕೆ ಮುಂದೂಡಲಾಯಿತು.

ಲಲಿತಾ ಅವರು ಬುಧವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಚಾಮರಾಜಪೇಟೆ ಸ್ಮಶಾನದಲ್ಲಿ ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಯಿತು.

ಶಾಸಕರಾದ ಆರ್‌. ಅಶೋಕ, ರವಿ ಸುಬ್ರಹ್ಮಣ್ಯ, ಮೇಯರ್‌ ಎನ್‌. ಶಾಂತ­ಕುಮಾರಿ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ಹಾಗೂ 80ಕ್ಕೂ ಅಧಿಕ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು. ಬಿಬಿಎಂಪಿ ಯಿಂದ ಲಲಿತಾ ಕುಟುಂಬಕ್ಕೆ ₨ 10 ಲಕ್ಷ ಮೊತ್ತದ ಚೆಕ್‌ ನೀಡಲಾಯಿತು. ಅವರ ಗೌರವಾರ್ಥ ಪಾಲಿಕೆ ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.