ADVERTISEMENT

ಬೆಸ್ಕಾಂ: ನಗರದಲ್ಲಿ ಎರಡೇ ವಲಯ

ತ್ವರಿತಗತಿಯಲ್ಲಿ ದೂರುಗಳ ವಿಲೇವಾರಿಗೆ ಯೋಜನೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:34 IST
Last Updated 27 ಮೇ 2017, 19:34 IST
ಬೆಸ್ಕಾಂ: ನಗರದಲ್ಲಿ ಎರಡೇ ವಲಯ
ಬೆಸ್ಕಾಂ: ನಗರದಲ್ಲಿ ಎರಡೇ ವಲಯ   

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು (ಬೆಸ್ಕಾಂ) ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ (ಬಿಎಂಎಜೆಡ್‌) ವಲಯಗಳ ಮರು ವಿಂಗಡಣೆಗೆ ಮುಂದಾಗಿದೆ. ನಗರ ವ್ಯಾಪ್ತಿಯಲ್ಲಿ ಇನ್ನು ಮುಂದೆ ಎರಡೇ ವಲಯಗಳು ಇರಲಿವೆ.

ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿದ್ಯುತ್‌ ಕಡಿತ ಸಮಸ್ಯೆ ವ್ಯಾಪಕವಾಗಿತ್ತು. ಪ್ರತಿ ಸಲ ಜೋರು ಮಳೆ ಸುರಿದಾಗಲೂ ಕನಿಷ್ಠ 5,000 ದೂರುಗಳು ಬರುತ್ತಿದ್ದವು. ವಿದ್ಯುತ್‌ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ಏಳೆಂಟು ಗಂಟೆ ಬೇಕಾಗುತ್ತಿತ್ತು. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಂಪೆನಿ ಯೋಜಿಸಿದೆ.

ಮಹಾನಗರ ವ್ಯಾಪ್ತಿಯಲ್ಲಿ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಿಭಾಗಗಳು ಇವೆ. ಮುಂದಿನ ದಿನಗಳಲ್ಲಿ ಪಶ್ಚಿಮ– ದಕ್ಷಿಣ ವಲಯ ಹಾಗೂ ಉತ್ತರ– ಪೂರ್ವ ವಲಯಗಳು ಇರಲಿವೆ.

‘ಮಹಾನಗರ ವ್ಯಾಪ್ತಿಯಲ್ಲಿ ಐಟಿ–ಬಿಟಿ  ಕಂಪೆನಿಗಳು, ರಿಯಲ್ ಎಸ್ಟೇಟ್‌ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ.  ಇವುಗಳಿಗೆ ನಿರಂತರ ವಿದ್ಯುತ್‌ ಪೂರೈಕೆ ಸವಾಲಿನ ಕೆಲಸವಾಗಿದೆ. ಅದರಲ್ಲೂ ಮಳೆ ಅನಾಹುತ ಸಂದರ್ಭದಲ್ಲಿ ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಸಮಯಾವಕಾಶ ಹಿಡಿಯುತ್ತಿತ್ತು. ವಲಯಗಳ ಮರುವಿಂಗಡಣೆ ಮಾಡಿದರೆ ತ್ವರಿತಗತಿಯಲ್ಲಿ ದೂರುಗಳ ವಿಲೇವಾರಿ ಮಾಡಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.


‘ವಿಭಾಗ ವಿಲೀನದ ಬಳಿಕ 25 ಮಂದಿ ಹೆಚ್ಚುವರಿ ಸಿಬ್ಬಂದಿ ಅಗತ್ಯ ಇದೆ. ಶೀಘ್ರದಲ್ಲಿ ನೇಮಕ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.