ADVERTISEMENT

ಮೇಲ್ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:41 IST
Last Updated 18 ನವೆಂಬರ್ 2017, 19:41 IST

ಬೆಂಗಳೂರು: ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿಯ ರೈಲ್ವೆ ಮೇಲ್ಸೇತುವೆಯ ತಡೆಗೋಡೆಗೆ ಶುಕ್ರವಾರ ರಾತ್ರಿ ಕಾರು ಡಿಕ್ಕಿ ಹೊಡೆದಿದೆ.

ರಾತ್ರಿ 12.30ರ ಸುಮಾರಿಗೆ ಕಾರಿನ (ಕೆಎ 04 ಎಂಜೆ 0576) ಚಾಲಕ ಮಲ್ಲೇಶ್ವರದಿಂದ ನವರಂಗ್ ವೃತ್ತದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಚಾಲಕ, ವಾಹನವನ್ನು ಮೇಲ್ಸೇತುವೆಯ ತಡೆಗೋಡೆಗೆ ಗುದ್ದಿಸಿದ್ದಾರೆ. ತಡೆಗೋಡೆಯ ತುದಿಯಲ್ಲಿ ಕಾರು ನಿಂತುಕೊಂಡಿತ್ತು. ಮತ್ತಷ್ಟು ರಭಸದಿಂದ ತಡೆಗೋಡೆಗೆ ಗುದ್ದಿದ್ದರೆ ಮೇಲ್ಸೇತುವೆಯಿಂದ ಕೆಳಗೆ ಬೀಳುವ ಸಾಧ್ಯತೆ ಇತ್ತು ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ತಿಳಿಸಿದರು.

ಮತ್ತೊಂದು ಕಾರಿಗೆ ಹಾನಿ: ತಡೆಗೋಡೆಗೆ ಹಾನಿಯಾಗಿದ್ದರಿಂದ ಅದರ ಅವಶೇಷಗಳು ಮೇಲ್ಸೇತುವೆಯ ಕೆಳಗಡೆ ನಿಂತಿದ್ದ ಕಾರಿನ ಮೇಲೆ ಬಿದ್ದಿವೆ. ಇದರಿಂದ ಆ ಕಾರಿಗೆ ಹಾನಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.