ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಏಳು ಮರಗಳು ಧರೆಗುರುಳಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.
ರಾತ್ರಿ 8.15ಕ್ಕೆ ಆರಂಭವಾದ ಮಳೆು 11.30ರವರೆಗೆ ಸುರಿಯಿತು. ಜೆ.ಪಿ.ನಗರದ 33ನೇ ಅಡ್ಡರಸ್ತೆ, ಬಾಷ್ಯಂ ವೃತ್ತ, ಪದ್ಮನಾಭನಗರ 13ನೇ ಮುಖ್ಯರಸ್ತೆ, ರಾಜರಾಜೇಶ್ವರಿನಗರ ಸಮೀಪದ ಐಡಿಯಲ್ ಹೋಮ್ಸ್, ಮತ್ತೀಕೆರೆ 9ನೇ ಅಡ್ಡರಸ್ತೆ, ಎಚ್ಎಂಟಿ ಲೇಔಟ್ ಸೇರಿ ವಿವಿಧೆಡೆ ಮರಗಳು ಧರೆಗುರುಳಿದವು.
ಪದ್ಮನಾಭನಗರ, ಕಮಲಮ್ಮನಗುಂಡಿ, ಪರಿಮಳನಗರ, ಶಿವನಗರ, ಕುರುಬರಹಳ್ಳಿ, ಪ್ರಕಾಶ್ನಗರ ನಾಲ್ಕನೇ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ರಾಮಮೂರ್ತಿನಗರ, ವಿಜಿನಾಪುರ, ಕವದೇನಹಳ್ಳಿ, ಮಂಗಮ್ಮನಪಾಳ್ಯ, ಕಗ್ಗದಾಸನಪುರ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.
‘ನಗರದದಲ್ಲಿ 10.2 ಮಿ.ಮೀ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತ 23.8 ಮಿ.ಮೀ ಮಳೆಯಾಗಿದೆ’ ಎಂದು ಹವಮಾನ ಇಲಾಖೆ ಸಿಬ್ಬಂದಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.