ADVERTISEMENT

ರೌಡಿ ನಾಗ ಮತ್ತೆ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:42 IST
Last Updated 22 ಮೇ 2017, 19:42 IST
ರೌಡಿ ನಾಗ ಮತ್ತೆ ಕಸ್ಟಡಿಗೆ
ರೌಡಿ ನಾಗ ಮತ್ತೆ ಕಸ್ಟಡಿಗೆ   

ಬೆಂಗಳೂರು: ರೌಡಿ ವಿ.ನಾಗರಾಜ್‌ ಹಾಗೂ ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿಯನ್ನು ಮತ್ತೆ ಮೇ 25ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಹತ್ತು ದಿನಗಳ  ಕಸ್ಟಡಿ ಅವಧಿ ಮುಗಿದಿದ್ದರಿಂದ ಹೆಣ್ಣೂರು ಠಾಣೆಯ ಪೊಲೀಸರು ಆರೋಪಿಗಳನ್ನು ನಗರದ 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದರು.

‘ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ತಮಿಳುನಾಡಿಗೆ ಕರೆದೊಯ್ಯಬೇಕಿದೆ. ಹೀಗಾಗಿ ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು’ ಎಂದು ಪೊಲೀಸರು ಮನವಿ ಮಾಡಿದರು.

ಮಾಧ್ಯಮದವರ ನೋಡಿ ಕಣ್ಣೀರಿಟ್ಟ: ವಿಚಾರಣೆ ಬಳಿಕ ನಾಗರಾಜ ಹಾಗೂ ಆತನ ಮಕ್ಕಳನ್ನು ಪೊಲೀಸರು  ಕೋರ್ಟ್‌ನಿಂದ ಹೊರಕರೆತಂದರು. ಈ ವೇಳೆ ಮಾಧ್ಯಮದವರನ್ನು ಕಂಡ ನಾಗರಾಜ್‌  ಕಣ್ಣೀರಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.