ಬೆಂಗಳೂರು: ಚಿಕ್ಕಜಾಲ ಸಮೀಪದ ಬೆಟ್ಟಹಲಸೂರು ಬಳಿ ಬುಧವಾರ ಲಾರಿ ಮೈಮೇಲೆ ಹರಿದಿದ್ದರಿಂದ ಮೋನಿಶ್ ಗೌಡ (19) ಎಂಬುವರು ಮೃತಪಟ್ಟಿದ್ದಾರೆ.
ರೇವಾ ಕಾಲೇಜಿನ ವಿದ್ಯಾರ್ಥಿ ಆಗಿದ್ದ ಅವರು, ತರಗತಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
‘ಮೋನಿಶ್ ಹಾಗೂ ಅವರ ಸ್ನೇಹಿತ ಭಾರ್ಗವ್, ಪ್ರತ್ಯೇಕ ಬೈಕ್ಗಳಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್ಗಳು ಪರಸ್ಪರ ಡಿಕ್ಕಿಯಾಗಿದ್ದವು. ಆಗ ಮೋನಿಶ್ ರಸ್ತೆಯಲ್ಲೇ ಉರುಳಿಬಿದ್ದರು. ಆಗ ಎದುರಿಗೆ ಬಂದ ಲಾರಿಯ ಚಕ್ರ ಅವರ ಮೇಲೆ ಹರಿದು ಹೋಗಿತ್ತು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.