ADVERTISEMENT

ವಿಶ್ವಶಾಂತಿ ಧಾರ್ಮಿಕ ಪ್ರವಚನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಬೆಂಗಳೂರು: ಕ್ರೈಸ್ತ ಮತ ಪ್ರಚಾರಕ ಡಾ.ಪಾಲ್‌ ದಿನಕರನ್‌ ಅವರು ‘ಏಸು ಕರೆಯುತ್ತಾನೆ’ ಎಂಬ ಬೃಹತ್‌ ಪ್ರಾರ್ಥನಾ ಸಭೆಯನ್ನು ಅರಮನೆ ಮೈದಾ­ನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಆಯೋಜಿಸಿದ್ದಾರೆ. ಶುಕ್ರವಾರ ಆರಂಭವಾದ ಈ ಕಾರ್ಯಕ್ರಮ ಭಾನುವಾರದವರೆಗೆ (ಅ.26) ನಡೆಯಲಿದೆ.

ಮೊದಲ ದಿನದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾವೋನ್ಮಾ­ದದಿಂದ ಪ್ರವಚನ ಆಲಿಸಿದರು. ಸಚಿವ ದಿನೇಶ್‌ ಗುಂಡೂರಾವ್‌ ಅವರು  ಸಹ ಸಭೆಯಲ್ಲಿ ಭಾಗವಹಿಸಿ­ದ್ದರು. ಶನಿವಾರ ಮುಖ್ಯಮಂತ್ರಿ ಸಿದ್ದರಾ­ಮಯ್ಯ ಅವರು ಈ ಸಭೆಗೆ ಬರಲಿದ್ದಾರೆ.
ವಿಶ್ವಶಾಂತಿಗಾಗಿ ಹಾಗೂ ಸರ್ವರ ಒಳಿತಿಗಾಗಿ ಈ ಪ್ರಾರ್ಥನಾ ಸಭೆ ಏರ್ಪ­ಡಿಸ­ಲಾಗಿದೆ. ಮತಾಂತರದ ಉದ್ದೇಶ ಇಲ್ಲ ಎಂದು ಪ್ರಾರ್ಥನಾ ಸಮಿತಿ ಹೇಳಿದೆ.

ಪಾಲ್‌ ಅವರು ತಾಯಿ ಸ್ಟೆಲ್ಲಾ ದಿನಕರನ್‌, ಪತ್ನಿ ಇವಾಂಜೆಲಿಯನ್ ದಿನಕರನ್ ಹಾಗೂ ಪುತ್ರರಾದ ಸ್ಯಾಮ್, ಶರೊನ್ ಮತ್ತು ಸ್ಟೀಟಿ ಅವರೊಂದಿಗೆ ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.