ADVERTISEMENT

ವಿಷ ಸೇವಿಸಿ ಯುವತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:41 IST
Last Updated 19 ಏಪ್ರಿಲ್ 2018, 19:41 IST

ಬೆಂಗಳೂರು: ಪ್ರೀತಿಸುವ ವಿಚಾರದಲ್ಲಿ ಮೂವರ ಮಧ್ಯೆ ಮನಸ್ತಾಪ ಉಂಟಾಗಿ ಮನನೊಂದ ಯುವತಿಯೊಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಚಿಕ್ಕಬಳ್ಳಾಪುರದ ಸಾಯಿರಾ ಬಾನು (30) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇಲ್ಲಿಯ ಹೆಗಡೆ ನಗರದಲ್ಲಿ ವಾಸವಾಗಿದ್ದ ಅವರು, ರಫಿಕ್‌ ಮತ್ತು ಜಯದೇವ್‌ ಪ್ರಕಾಶ್‌ ಎಂಬುವರೊಂದಿಗೆ ಸೇರಿ ಸಂಘ ರಚಿಸಿ, ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು ಎಂದು ಕೆ.ಜಿ. ಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಕೆಲ ಸಮಯದಿಂದ ವ್ಯವಹಾರ ನಡೆಸುತ್ತಿದ್ದ ಮೂವರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಬುಧವಾರ ರಫಿಕ್‌, ಸಾಯಿರಾಳ ಮನೆಗೆ ಹೋದಾಗ ಆಕೆ ವಿಷ ಸೇವಿಸಿದ್ದಾಳೆ. ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ADVERTISEMENT

ಈ ವಿಷಯವನ್ನು ಚಿಕ್ಕಬಳ್ಳಾಪುರದಲ್ಲಿರುವ ಸಾಯಿರಾ ತಾಯಿಗೆ ತಿಳಿಸಿದ ಬಳಿಕ ರಫೀಕ್‌ ಮತ್ತು ಸಂಘದಲ್ಲಿದ್ದ ಜಯದೇವ್ ಪ್ರಕಾಶ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.