ADVERTISEMENT

ಸ್ಫೋಟ ಪ್ರಕರಣ ಸಿಗದ ಜಾಮೀನು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:48 IST
Last Updated 25 ಏಪ್ರಿಲ್ 2017, 19:48 IST

ನವದೆಹಲಿ:  ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು 2013ರಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ  ಆರೋಪಿ ಬಷೀರ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿತು.

ತಮಿಳುನಾಡಿನ ನಿಷೇಧಿತ ಅಲ್‌– ಉಮ್ಮಾ ಸಂಘಟನೆಗೆ ಸೇರಿರುವ ಪ್ರಮುಖ ಆರೋಪಿಗೆ ಸಿಮ್‌ ಕಾರ್ಡ್‌ ಒದಗಿಸಿದ್ದ ಆರೋಪವು ತಿರುನಲ್ವೇಲಿಯ ಬಷೀರ್‌ ಮೇಲಿದೆ. ಅಲ್ಲದೆ, ಈತನೂ ಪ್ರತ್ಯೇಕವಾಗಿ ಬಾಂಬ್‌ ಸ್ಫೋಟಿಸುವ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದು, ರಾಜ್ಯ ಹೈಕೋರ್ಟ್ ಕಳೆದ ಜನವರಿ 5ರಂದು ಜಾಮೀನು ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT