ADVERTISEMENT

‘ಅಶ್ವತ್ಥ್ ಮತ್ತೊಮ್ಮೆ ಹುಟ್ಟಿ ಬಾ’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2015, 19:35 IST
Last Updated 29 ನವೆಂಬರ್ 2015, 19:35 IST

ಬೆಂಗಳೂರು: ಆದರ್ಶ ಸುಗಮ ಸಂಗೀತ ಅಕಾಡೆಮಿಯು ಡಿಸೆಂಬರ್ 4 ರಂದು ಶ್ರೀನಿವಾಸನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ಸಂಜೆ 5.30ಕ್ಕೆ ಗಾಯಕ ಸಿ. ಅಶ್ವತ್ಥ್ ಸ್ಮರಣಾರ್ಥ ‘ಅಶ್ವತ್ಥ್ ಮತ್ತೊಮ್ಮೆ ಹುಟ್ಟಿ ಬಾ’ ಕಾರ್ಯಕ್ರಮವನ್ನು ಆಯೋಜಿಸಿದೆ.

ಗೆಲುವು ಕನ್ನಡ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಅಶ್ವತ್ಥ್ ಅವರಿಗೆ  ಗಾಯನ, ನೃತ್ಯ ಮತ್ತು ನುಡಿನಮನ ಸಲ್ಲಿಸಲಾಗುವುದು. ಗಾಯಕಿ ಮಾಲತಿ ಶರ್ಮಾ ಅವರಿಗೆ ಈ ವರ್ಷದ ‘ಸಿ. ಅಶ್ವತ್ಥ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.