ADVERTISEMENT

ಸೌಕರ್ಯಕ್ಕಾಗಿ ಶಾಸಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:17 IST
Last Updated 11 ನವೆಂಬರ್ 2017, 5:17 IST

ಜನವಾಡ: ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಮಾಮಬಾದ್ ಹಳ್ಳಿ, ಗುಮ್ಮಾ, ಓಡವಾಡ ಹಾಗೂ ತಾಜಲಾಪುರ ಗ್ರಾಮಸ್ಥರು ವಿವಿಧ ಸೌಕರ್ಯ ಒದಗಿಸುವಂತೆ ಶಾಸಕ ರಹೀಂಖಾನ್ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.

‘ಇಮಾಮಬಾದ್ ಹಳ್ಳಿಯಲ್ಲಿ ಬಸ್ ನಿಲ್ದಾಣ, ಗುಮ್ಮಾ ಹಾಗೂ ಓಡವಾಡದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು. ತಾಜಲಾಪುರದಲ್ಲಿನ ಅಂಗನವಾಡಿ ಕಟ್ಟಡ ದುರಸ್ತಿಪಡಿಸಬೇಕು ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು’ ಎಂದು ಬೇಡಿಕೆ ಮಂಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರಾದ ಶಾಂತಕುಮಾರ ಗುಮ್ಮಾ, ಹರ್ಷವರ್ಧನ್ ಓಡವಾಡ, ಸವಿತಾ ವೀರಭದ್ರಪ್ಪ ತಾಜಲಾಪುರ, ಎಂ.ಡಿ. ಫಿರೋಜ್ ಅಷ್ಟೂರು, ಪ್ರಭಾಕರ ಸಿದ್ರಾಮಪ್ಪ, ಬಾಬುರಾವ್ ಕಮಠಾಣೆ, ರಾಹುಲ್ ಪ್ರಭು, ಪ್ರವೀಣ ರಾಬರ್ಟ್, ತುಕಾರಾಮ, ರಾಜು ಪಾಟೀಲ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.