ADVERTISEMENT

ಹೆಬ್ಬಾಳ್ಕರ್‌ ವಿರುದ್ಧ ಕನ್ನಡ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 6:36 IST
Last Updated 1 ಸೆಪ್ಟೆಂಬರ್ 2017, 6:36 IST

ಭಾಲ್ಕಿ: ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಖಂಡಿಸಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ, ಯುವಕ್ರಾಂತಿ ಸಂಘ ಟನೆ ಪದಾಧಿಕಾರಿಗಳು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದ ಹಿತಕ್ಕೆ ವಿರುದ್ಧವಾಗಿ ಮಾತನಾಡಿರುವ ಹೆಬ್ಬಾಳ್ಕರ್ ಅವರನ್ನು ಸರ್ಕಾರ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆ ಪ್ರಮುಖರಾದ ಸಂಗಮೇಶ ಭೂರೆ, ಸಂಗಮೇಶ ಗುಮ್ಮೆ, ವೀರೇಶ ಸ್ವಾಮಿ, ಸಚಿನ ಪರಶಣೆ, ಪವನ ಪೀರಗೆ, ಸಂತೋಷ ಪಾಂಚಗೆ, ಮಹಾದೇವ ಸೂರ್ಯವಂಶಿ, ಮನ್ಮಥ ಸ್ವಾಮಿ, ಸಂತೋಷ ಹಡಪದ, ದಿಲೀಪ ಜೊಳದಪಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT