ADVERTISEMENT

ಸ್ಮಶಾನಭೂಮಿ ಒತ್ತುವರಿ ತೆರವಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:51 IST
Last Updated 20 ಏಪ್ರಿಲ್ 2017, 6:51 IST

ಚಾಮರಾಜನಗರ: ತಾಲ್ಲೂಕಿನ ಕಾಗಲವಾಡಿ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿಗೆ ಸೇರಿದ ಆದಿಜಾಂಬವ ಸಮುದಾಯದ ಸ್ಮಶಾನ ಭೂಮಿಯನ್ನು ಅಳತೆ ಮಾಡಲಾಯಿತು.ತಾಲ್ಲೂಕು ಭೂಮಾಪಕ ಅಧಿಕಾರಿ ಎಚ್.ವಿ. ಮಹದೇವಪ್ರಸಾದ್ ಅವರು ಸಮುದಾಯದ ಮುಖಂಡರು ಹಾಗೂ ಅಕ್ಕಪಕ್ಕದ ಜಮೀನಿನ ಮಾಲೀಕರ ಸಮ್ಮುಖದಲ್ಲಿ ಅಳತೆ ಮಾಡಿದರು.

ಬಳಿಕ ಎಚ್.ವಿ. ಮಹದೇವಪ್ರಸಾದ್ ಮಾತನಾಡಿ, ಜಿಲ್ಲಾಧಿಕಾರಿ ಆದೇಶದಂತೆ ಆದಿಜಾಂಬವ ಸಮುದಾಯದ ಸ್ಮಶಾನಭೂಮಿ ಅಳತೆ ಮಾಡಲಾಗಿದೆ. ಸ್ಮಶಾನಭೂಮಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವನಪುರ ರಾಜಶೇಖರ್ ಮಾತನಾಡಿ, ‘ಕಾಗಲವಾಡಿ ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಸ್ಮಶಾನಕ್ಕಾಗಿ ಸರ್ಕಾರದಿಂದ 2.25 ಎಕರೆ ಜಮೀನು ನೀಡಿತು. ಈ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಜಿಲ್ಲಾಧಿಕಾರಿ ಅವರು ಸ್ಪಂದಿಸಿ ಸ್ಮಶಾನ ಭೂಮಿ ಅಳತೆ ಮಾಡಿಸುತ್ತಿರುವುದು ಸಂತಸವಾಗಿದೆ’ ಎಂದರು
ಮುಖಂಡರಾದ ಬಸವರಾಜು, ತಿಬ್ಬಯ್ಯ, ಕೃಷ್ಣ, ಡಿಗ್ಗಯ್ಯ, ಜಯಶಂಕರ್, ಮಹದೇವ, ಲಿಂಗಣ್ಣ, ಪ್ರಕಾಶ್, ಬಸವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT