ADVERTISEMENT

‘ಜನ್–ಧನ್‌’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2014, 9:05 IST
Last Updated 23 ಆಗಸ್ಟ್ 2014, 9:05 IST

ಸಂತೇಮರಹಳ್ಳಿ: ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಸದಸ್ಯರು ಬ್ಯಾಂಕ್‌ ಖಾತೆಯನ್ನು ಕಡ್ಡಾಯವಾಗಿ ತೆರಯಬೇಕು ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಸಂತೇಮರಹಳ್ಳಿ ಶಾಖೇಯ ವ್ಯವಸ್ಥಾಪಕ ಜೆ.ವಿ. ಸುಕುಮಾರ್‌ ತಿಳಿಸಿದರು.

ಸಮೀಪದ ಕೆಂಪನಪುರ ಗ್ರಾಮದಲ್ಲಿ ಶುಕ್ರವಾರ ಸಂತೇಮರಹಳ್ಳಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖೆ ವತಿಯಿಂದ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಜನ್‌–ಧನ್‌ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿ ಕುಟುಂಬದ ಇಬ್ಬರು ಸದಸ್ಯರು ಕಡ್ಡಾಯವಾಗಿ ಬ್ಯಾಂಕ್‌ ಉಳಿತಾಯ ಖಾತೆ ತೆರೆಯಬೇಕು. ಇದರಿಂದ ರೈತರಿಗಾಗಲೀ, ಇತರ ಫಲಾನುಭವಿಗಳಿಗೆ ಬ್ಯಾಂಕ್‌ ಖಾತೆಯ ಮೂಲಕ ಸುಲಭವಾಗಿ ಹಣ ದೊರಕಲು ಸಹಾಯವಾಗುತ್ತದೆ ಎಂದರು.

ಬ್ಯಾಂಕ್‌ ಖಾತೆ ತೆರೆಯುವ ಮೂಲಕ ಹಣವನ್ನು ಉಳಿತಾಯ ಮಾಡಿ ಆರ್ಥಿಕವಾಗಿ ಸದೃಢರಾಗಬಹುದು. ಸರ್ಕಾರದ ಸವಲತ್ತುಗಳು ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗುತ್ತದೆ. ವ್ಯವಹಾರಗಳಿಗಾಗಿ ಸ್ಮಾಟ್‌ಕಾರ್ಡ್‌, ರೂಪೇ ಕಾರ್ಡ್‌ ಲಭ್ಯವಿರುತ್ತದೆ.

₨ 1 ಲಕ್ಷದ ವರೆಗೆ ಅಪಘಾತ ವಿಮೆ ಸೌಲಭ್ಯ ಪಡೆದುಕೊಳ್ಳಬಹುದು. ಬ್ಯಾಂಕ್‌ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮಸ್ಥರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭ 120 ಮಂದಿಗೆ ಉಳಿತಾಯ ಖಾತೆ ತೆರೆಯಲಾಯಿತು.

ಬ್ಯಾಂಕ್‌ ಅಧಿಕಾರಿ ರೋಹಿತ್‌, ಫಲಾನುಭವಿಗಳಾದ ಸಿದ್ದಯ್ಯ, ಬಸವಣ್ಣ, ಗಿರೀಶ್‌, ಮಹದೇವಸ್ವಾಮಿ, ಮರಿಸ್ವಾಮಿ, ಮೂರ್ತಿ, ಮಣಿಕಂಠ, ಚಂದ್ರಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.