ADVERTISEMENT

ಚಿರತೆಗಳ ಆಟ, ಸವಾರರಿಗೆ ಸಂಕಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 16:47 IST
Last Updated 19 ಜುಲೈ 2018, 16:47 IST
   

ಚಾಮರಾಜನಗರ: ಸತ್ಯಮಂಗಲ ಅರಣ್ಯದ ಬಣ್ಣಾರಿ ಘಾಟಿ ರಸ್ತೆಯಲ್ಲಿ ಎರಡು ಚಿರತೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಣ್ಣಾಟವಾಡುತ್ತಾ ಸವಾರರಲ್ಲಿ ಆತಂಕ ಉಂಟು ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ.

ಘಾಟಿಯ 27ನೇ ತಿರುವಿನಲ್ಲಿ ಎರಡು ಚಿರತೆಗಳು ಬಹಳ ಹೊತ್ತು ರಸ್ತೆಯ ಮಧ್ಯದಲ್ಲೆ ಆಟವಾಡುತ್ತಿದ್ದುದನ್ನು ನೋಡಿ ವಾಹನ ಸವಾವರು ಗಾಬರಿಗೊಳಗಾದರು. ಇದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ನಂತರ ಸತ್ಯಮಂಗಲ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆಟವಾಡುತ್ತಿದ್ದ ಚಿರತೆಗಳನ್ನು ಕಾಡಿಗೆ ಅಟ್ಟಿದರು. ನಂತರ ವಾಹನಗಳ ಸಂಚಾರ ಸಹಜ ಸ್ಥಿತಿಗೆ ಬಂತು.

ADVERTISEMENT

(ವಿಡಿಯೊ:https://www.facebook.com/prajavani.net/videos/2009461159085728/)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.