ADVERTISEMENT

ಕ್ರೀಡಾಭಿವೃದ್ಧಿಗೆ ₹10 ಲಕ್ಷ

ಸಂಸದ ಕೆ.ಎಚ್.ಮುನಿಯಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:00 IST
Last Updated 8 ಮಾರ್ಚ್ 2017, 10:00 IST

ಶಿಡ್ಲಘಟ್ಟ: ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಬೇಡಿಕೆಯ ಮೇರೆಗೆ ತಾಲ್ಲೂಕಿನಲ್ಲಿ ಕ್ರೀಡಾಭಿವೃದ್ಧಿಗೆ ಅನುದಾನದಲ್ಲಿ ₹ 10 ಲಕ್ಷ ನೀಡುತ್ತೇನೆ ಎಂದು  ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಸದಸ್ಯರಿಗೆ ಅನುದಾನ ಪತ್ರ ನೀಡಿ  ಮಾತನಾಡಿದ ಅವರು,  ತಾಲ್ಲೂಕಿನಲ್ಲಿ ಕ್ರೀಡಾಕ್ಷೇತ್ರ ಅಭಿವೃದ್ಧಿಯಾಗಬೇಕು. ಕ್ರೀಡಾಪಟು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ನಗರದ ನೆಹರೂ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಕೊರತೆ ಇದೆ ಎಂಬುದು ತಿಳಿದುಬಂದಿದೆ ಎಂದು ತಿಳಿಸಿದರು.

ಅನುದಾನದಲ್ಲಿ ಮಲ್ಟಿ ಜಿಮ್‌ ಅಳವಡಿಸಿ ಹಾಗೂ ಪಾದಾಚಾರಿ ಮಾರ್ಗ ಅಳವಡಿಸಬೇಕು. ಗುಣಮಟ್ಟದ ಕಾಮಗಾರಿ ನಡೆಯುವಂತೆ ಗಮನಹರಿಸಬೇಕು ರಂದು ಸೂಚನೆ ನೀಡಿದರು.

ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌, ಅಧ್ಯಕ್ಷ ಎನ್‌.ಆರ್‌.ನಿರಂಜನ್‌,  ಕಾರ್ಯದರ್ಶಿ ಜೆ.ವಿ.ಸುರೇಶ್‌, ನಗರಸಭೆ ಸದಸ್ಯ ಬಾಲಕೃಷ್ಣ, ಹಫೀಜುಲ್ಲಾ, ಜಗದೀಶ್‌, ಮುನಿಕೃಷ್ಣಪ್ಪ, ಮುರುಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.