ADVERTISEMENT

ಅನಾರೋಗ್ಯದಿಂದ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:15 IST
Last Updated 18 ಸೆಪ್ಟೆಂಬರ್ 2017, 9:15 IST

ಚಿಕ್ಕಮಗಳೂರು: ತಾಲ್ಲೂಕಿನ ನರಗನಹಳ್ಳಿಯ ಯೋಧ ಎಂ.ಮಂಜುನಾಥ (44)  ನಿಧನರಾಗಿದ್ದಾರ. ಅವರ ಅಂತ್ಯಕ್ರಿಯೆ ನಗರದ ಉಪ್ಪಳ್ಳಿಯ ಮುಕ್ತಿಧಾಮ ಚಿತಾಗಾರದಲ್ಲಿ ಭಾನುವಾರ ನಡೆಯಿತು.

ಬ್ರೇನ್ ಟ್ಯುಮರ್ ನಿಂದ ಬಳಲುತ್ತಿದ್ದ ಮಂಜುನಾಥ ಅವರು ಊಟಿಯ ಮಿಲಿಟರಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದರು. ಅವರಿಗೆ ಪತ್ನಿ ಸುಮಿತ್ರಾ. ಪುತ್ರ ತನ್ವಿತ್, ಪುತ್ರಿ ಪೂಜಾ ಇದ್ದಾರೆ.

ಮಂಜುನಾಥ ಅವರು 1993ರಲ್ಲಿ ಸುಬೇದಾರ್ ಆಗಿ ಸೇನೆಗೆ ಸೇರಿದ್ದರು. ಕಾಶ್ಮೀರ, ಪಂಜಾಬ್, ಅಸ್ಸಾಂ, ಸಿಕ್ಕಿಂ, ಸಿಯಾಚಿನ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಎರಡು ವರ್ಷಗಳಿಂದ ಬ್ರೇನ್ ಟ್ಯುಮರ್ ನಿಂದ ಅವರು ಬಳಲುತ್ತಿದ್ದರು. ಊಟಿಯ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.