ಕಡೂರು: ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಯ ಸಹ ಯೋಗದಲ್ಲಿ ಜನರಿಗೆ ಉಪಯೋಗವಾ ಗುವಂತೆ ಒಂದು ಸಂಪರ್ಕ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ನಿರಂತರ ಗಣೇಶ್ ತಿಳಿಸಿದರು.
ಕೆ.ಬಿದರೆಯಲ್ಲಿ ಭಾನುವಾರ ಸರ್ಕಾರಿ ಯೋಜನೆಗಳ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಫಲಾನುಭವಿಗಳ ಕೊರತೆಯಿಂದಾಗಿ ಸರ್ಕಾರದ ಕಾರ್ಯಕ್ರ ಮಗಳು ಸರಿಯಾಗಿ ಅನುಷ್ಠಾನಗೊಳ್ಳದೆ ಅನುದಾನ ಸರ್ಕಾ ರಕ್ಕೆ ವಾಪಸ್ ಹೋಗುತ್ತಿದೆ. ಸಂಪರ್ಕ ಕೇಂದ್ರದಲ್ಲಿ ಸರ್ಕಾರಿ ಯೋಜನೆಗಳಿಗೆ ಉಚಿತವಾಗಿ ಆನ್ಲೈನ್ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಸ್ವಯಂ ಉದ್ಯೋಗ ಆರಂಭಿಸುವವ ರಿಗೆ ಅಗತ್ಯ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿ ಗಳಿಂದ ಕೊಡಿಸುವುದರ ಜೊತೆ ಮಾರ್ಗದರ್ಶನ ಸಿಗುವಂತೆ ಮಾಡಿ ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುವ, ಕಡೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವ ನ್ನಾಗಿಸುವ ಆಶಯ ನಮ್ಮದು ಎಂದರು.
ಆರ್.ಗುಂಡುರಾವ್ ಫೌಂಡೇಷನ್ ಕಾರ್ಯದರ್ಶಿ ಮಂಜುನಾಥ ಮಾತನಾಡಿ, ದೇವರಾಜ ಅರಸು ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳಿಗೆ ಚೈತನ್ಯ ಮತ್ತು ಸಂಪ್ರದಾಯಿಕ ಯೋಜನೆಯಡಿ ಶೇ 4 ಬಡ್ಡಿ ದರದಲ್ಲಿ ₹40 ಸಾವಿರ ಸಾಲ ದೊರೆಯುತ್ತದೆ. ಇದರಲ್ಲಿ 10 ಸಾವಿರ ಸಬ್ಸಿಡಿ ಇರುತ್ತದೆ ಎಂದರು.
ಕೆ.ಬಿದರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇವತಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಅಭಿವೃದ್ದಿ ಮತ್ತು ಸಂರಕ್ಷಣಾ ಸಂಸ್ಥೆ ಅಧ್ಯಕ್ಷೆ ರಾಜಕುಮಾರಿ,ನಿ ರ್ದೇಶಕರಾದ ಪುಷ್ಪಾ, ಪಿ.ಆರ್.ಆನಂದ, ಯಶವಂತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆಂಚಪ್ಪ, ನಾಗರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.