ADVERTISEMENT

ಸತ್ಯರಾಜ್ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:00 IST
Last Updated 22 ಏಪ್ರಿಲ್ 2017, 6:00 IST
ಕಡೂರು: ತಮಿಳು ಚಿತ್ರನಟ ಸತ್ಯರಾಜ್ ಕನ್ನಡಿಗರ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡಬಣ) ಕಾರ್ಯಕರ್ತರು ಸತ್ಯರಾಜ್ ಪ್ರತಿಕೃತಿ ದಹಿಸಿದರು.
 
ಸಂಘಟನೆಯ ಸದಸ್ಯರು ಕಡೂರಿನ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದ ತನಕ ಮೆರವಣಿಗೆಯಲ್ಲಿ ಸಾಗಿ ನಂತರ ವೃತ್ತದ ಬಳಿ ಪ್ರತಿಕೃತಿ ದಹಿಸಿದರು. 
 
ತಾಲ್ಲೂಕು ಅಧ್ಯಕ್ಷ ಎಸ್.ಎಚ್. ಆನಂದ್, ಉಪಾಧ್ಯಕ್ಷ ಕೆ.ಕಿರಣ್ ಕುಮಾರ್, ಎಸ್.ಕೆ.ಸಂತೋಷ್, ಕೆ.ಸಿ. ಮಂಜುನಾಥ್, ನಗರ ಘಟಕದ ಅಧ್ಯಕ್ಷ ಕೆ.ಪಿ.ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಗಣೇಶ್, ಸಂದೀಪ್, ನಾಗೇಂದ್ರ, ಅರುಣ್, ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.