ದಾವಣಗೆರೆ: ನೋಟು, ನಾಣ್ಯಗಳ ಮೇಲೆ ‘ಭಾರತ ಮಾತೆ’ ಚಿತ್ರ ಮುದ್ರಿಸಲು ಒತ್ತಾಯಿಸಿ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ದಯಾಮರಣ ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ ಹೇಳಿದರು.
‘ಮಕ್ಕಳಲ್ಲಿ ದೇಶಪ್ರೇಮ, ಏಕತೆ, ದೇಶಾಭಿಮಾನ ಮೂಡಿಸುವ ಉದ್ದೇಶದಿಂದ ನೋಟು, ನಾಣ್ಯಗಳಲ್ಲಿ ಭಾರತ ಮಾತೆಯ ಚಿತ್ರ ಮುದ್ರಿಸಬೇಕು. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಸಹಿ ಸಂಗ್ರಹ ಅಭಿಯಾನ ನಡೆಸಿದ್ದೇನೆ. ಇದನ್ನು ಬೆಂಬಲಿಸಿ 10,600 ಮಂದಿ ಸಹಿ ಮಾಡಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೋಟು, ನಾಣ್ಯಗಳಲ್ಲಿ ಭಾರತ ಮಾತೆ ಚಿತ್ರದ ಕೆಳಗೆ ‘ವಂದೇ ಭಾರತ ಮಾತರಂ’ ಎಂದೂ ಮುದ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗಿರಿಜಮ್ಮ ಶೀಲವಂತ, ಶಾಂತಾ, ರೇವಣಸಿದ್ದಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.