ಕುಂದಗೋಳ: ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಕಳೆದ ವರ್ಷ ನಿರ್ಮಾಣವಾಗಿದ್ದ ಕಾಂಕ್ರಿಟ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದೀಗ ಅದೇ ರಸ್ತೆಗೆ ಪುನ: ಕಾಂಕ್ರಿಟ್ ತೇಪೆ ಹಾಕಲಾಗಿದೆ.
ಗ್ರಾಮದ ಜನತಾ ಪ್ಲಾಟ್ನಲ್ಲಿ 2016–17ನೇ ಸಾಲಿನಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿತ್ತು. ಕಾಮಗಾರಿ ಮುಗಿದ ಸ್ವಲ್ಪ ದಿನಗಳಲ್ಲೇ ರಸ್ತೆಯು ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಇದೀಗ ₹ 7 ಲಕ್ಷ ಅನುದಾನದಲ್ಲಿ ಮೂರು ಇಂಚು ಕಾಂಕ್ರಿಟ್ ಹಾಕಲಾಗಿದೆ. ‘ಕಾಂಕ್ರಿಟ್ ಕಿತ್ತು ಹೋಗಿರುವುದರಿಂದ ದುರಸ್ಥಿ ಮಾಡಲಾಗಿದೆ’ ಎಂದು ಗುತ್ತಿಗಾದಾರ ಡಿ.ಎಂ.ಆಡರಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.