ಗುತ್ತಲ: ಸಮೀಪದ ಹರಳಹಳ್ಳಿ ಗ್ರಾಮದ ತುಂಗಭದ್ರ ನದಿಯ ದಡದಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಪಡೆದು ತಹಶೀಲ್ದಾರ್ ಜೆ.ಬಿ.ಮಜ್ಜಗಿ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿ ಸುಮಾರು 7 ಲಾರಿಯಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ತಂಡದಲ್ಲಿ ಕಂದಾಯ ನಿರೀಕ್ಷಕ ಆರ್.ಎನ್.ಮಲ್ಲಾಡದ, ಉಪತಹಶೀಲ್ದಾರ್ ಎಸ್.ಆರ್.ಅಪ್ಪಿನಕೋಪ್ಪ, ಗ್ರಾಮ ಲೆಕ್ಕಾಧಿಕಾರಿ ಫಕ್ಕೀರೇಶ ಬಾರ್ಕಿ, ಪ್ರಕಾಶ ಉಜನಿ, ಎಸ್.ಪಿ.ರಿತ್ತಿಮಠ, ಸಬ್ಇನ್ಸ್ಪೆಕ್ಟರ್ ಬಸವಾಜ ಕಾಮನಬೈಲ ಮತ್ತು ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.