ADVERTISEMENT

ಉಮಾಭಾರತಿ ರಾಜೀನಾಮೆ ನೀಡಲಿ: ಖರ್ಗೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:41 IST
Last Updated 21 ಏಪ್ರಿಲ್ 2017, 5:41 IST

ಕಲಬುರ್ಗಿ: ‘ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ಎದುರಿಸಲಿ­ರುವ ಉಮಾಭಾರತಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆಯವರ ವಿರುದ್ಧ ಆರೋಪ ಕೇಳಿ ಬಂದಾಗಲೆಲ್ಲ ಬಿಜೆಪಿಯವರು ರಾಜೀನಾಮೆಗೆ ಒತ್ತಾಯಿಸುತ್ತಾರೆ. ಅದೇ ರೀತಿ ಉಮಾಭಾರತಿ ಅವರು ರಾಜೀನಾಮೆ ನೀಡಬೇಕು’ ಎಂದು ಹೇಳಿದರು.

‘ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊ­ಳ್ಳಲು ಮತ್ತು ಮುಂದಿನ ಚುನಾ ವಣೆ ಗೆಲ್ಲಲು ಬಿಜೆಪಿ ಯವರು ಪುನಃ ರಾಮ ಮಂದಿರ ವಿಷಯ ಎಳೆದು ತರುತ್ತಿದ್ದಾರೆ. ಇದೇ ವಿಷಯವನ್ನು ಮುಂದಿರಿಸಿ­ಕೊಂಡು ಬಿಜೆಪಿಯವರು ಶಾಂತಿ ಕದಡುತ್ತಾರೆ’ ಎಂದು ದೂರಿದರು.‘ಲಂಡನ್‌ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನಕ್ಕೊ­ಳಗಾಗಿ, ನಂತರ ಬಿಡುಗಡೆಯಾಗಿದ್ದು ದೊಡ್ಡ ವಿಷಯ­ವೇನಲ್ಲ. ಮಲ್ಯ ಅವರನ್ನು ಭಾರತಕ್ಕೆ ಕರೆ ತಂದು ಹಣ ವಸೂಲಿ ಮಾಡಬೇಕು. ಆಗ ಅದು ಸರ್ಕಾರದ ಸಾಧನೆಯಾಗಲಿದೆ’ ಎಂದು ಹೇಳಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT