ADVERTISEMENT

ಸಮಾನ ಪಿಂಚಣಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 8:16 IST
Last Updated 1 ಜನವರಿ 2018, 8:16 IST

ಕಲಬುರ್ಗಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾನವಾದ ಪಿಂಚಣಿ ನೀಡುವ ವ್ಯವಸ್ಥೆ ಜಾರಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಕಾಶಿನಾಥ ಬೀದರಕರ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಮಾಜಿ ಮತ್ತು ಹಾಲಿ ಸಂಸದ, ಶಾಸಕರಿಗೆ ಪಿಂಚಣಿ ನೀಡುವುದಕ್ಕೆ ಯಾವುದೇ ತರಹದ ತೊಂದರೆಗಳಿಲ್ಲ. ಆದರೆ ನಿವೃತ್ತ ನೌಕರರಿಗೆ ಔಷಧಿ, ಪಿಂಚಣಿ ನೀಡಲು ಇಂದಿನ ಸರ್ಕಾರ ಹಲವಾರು ಸಮಸ್ಯೆಗಳನ್ನು ಹೇಳುತ್ತದೆ. ಔಷಧ ಮತ್ತು ಸಮಾನವಾದ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೇಂದ್ರ ಸರ್ಕಾರದ 7ನೇ ವೇತನ ಆಯೋಗ ಜಾರಿಮಾಡಿದಂತೆ ರಾಜ್ಯ ಸರ್ಕಾರಕ್ಕೂ 7ನೇ ವೇತನ ಆಯೋಗ ಜಾರಿಗೆ ಮಾಡಬೇಕು. 25 ರಾಜ್ಯಗಳಲ್ಲಿ 7ನೇ ವೇತನ ಆಯೋಗ ಜಾರಿಯಾಗಿದೆ. ಅದರಂತೆ ನಮ್ಮ ರಾಜ್ಯದಲ್ಲೂ 7ನೇ ವೇತನ ಆಯೋಗ ಜಾರಿಗೆ ಮಾಡಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾ.ಸಿ.ಗಂಜಲಖೇಡ, ಉಪಾಧ್ಯಕ್ಷ ಎಸ್‌.ವಿ.ಮಠಪತಿ, ಮುಖಂಡರಾದ ನಾಗಣ್ಣ ಎಸ್‌.ಗಣಜಲಖೇಡ, ವೀರಣ್ಣ ಎಂ.ಪಡಶೆಟ್ಟಿ, ಕಾಶಪ್ಪ ವಾಂಜರಖೇಡ, ಆರ್‌.ಎಸ್‌.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.