ADVERTISEMENT

ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಸಾವು

ಬೆಂಕಿ ಹಚ್ಚಿ ನಾಲ್ವರ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 11:35 IST
Last Updated 5 ಜುಲೈ 2018, 11:35 IST

ಕಲಬುರ್ಗಿ: ನಗರದ ಎಂಎಸ್‌ಕೆ ಮಿಲ್‌ ಪ್ರದೇಶದ ಹುಸೇನಿ ಗಾರ್ಡನ್‌ನಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿ ನಾಲ್ವರ ಸಜೀವ ದಹನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಸೈಯದ್ ಅಕ್ಬರ್ (42), ಅವರ ಪತ್ನಿ ಶಹನಾಜ್ ಬೇಗಂ (35) ಮೃತಪಟ್ಟವರು. ಮಕ್ಕಳಾದ ಸಾನಿಯಾ ಬೇಗಂ ಮತ್ತು ಸೈಯದ್ ಯಾಸೀನ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸೈಯದ್ ಅಕ್ಬರ್ ಸಹೋದರಿ ಹೀನಾ ಕೌಸರ್ ಬೇಗಂ ಅವರ ಪತಿ ಮುಸ್ತಫಾ ಮಹಮ್ಮದ್‌ ಸಲೀಂ ಅವರು ಬುಧವಾರ ಬೆಳಗಿನ ಜಾವ 3 ಗಂಟೆಗೆ ಮನೆಯ ಬಾಗಿಲಿನ ಕೆಳಗಿನಿಂದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

ತಂಗಿಗೆ ಕಿರುಕುಳ ಕೊಡಬೇಡ ಎಂದು ಅಣ್ಣ ಸೈಯದ್ ಅಕ್ಬರ್ ಬುದ್ಧಿವಾದ ಹೇಳಿದ್ದರಿಂದ ಕುಪಿತಗೊಂಡ ಮುಸ್ತಫಾ ಮಹಮ್ಮದ್ ಸಲೀಂ ಬೆಂಕಿ ಹಚ್ಚಿ, ನಾಲ್ವರ ಕೊಲೆಗೆ ಯತ್ನಿಸಿದ್ದಾರೆ ಎಂದು ಮೃತ ಅಕ್ಬರ್ ಸಹೋದರ ಮತ್ತು ಸಹೋದರಿ ದೂರಿದ್ದರು. ನ್ಯೂ ರಾಘವೇಂದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.