ADVERTISEMENT

ಕೊಡಗಿನಲ್ಲಿ ಮಳೆ; ಕಾವೇರಿ ಹರಿವು ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:31 IST
Last Updated 8 ಸೆಪ್ಟೆಂಬರ್ 2017, 7:31 IST
ಗುರುವಾರ ಅಪರಾಹ್ನ ಸುರಿದ ರಭಸದ ಮಳೆಯಿಂದ ನಾಪೋಕ್ಲು ಸಮೀಪದ ಕೊಟ್ಟಮುಡಿಯಲ್ಲಿ ಕಾವೇರಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂತು
ಗುರುವಾರ ಅಪರಾಹ್ನ ಸುರಿದ ರಭಸದ ಮಳೆಯಿಂದ ನಾಪೋಕ್ಲು ಸಮೀಪದ ಕೊಟ್ಟಮುಡಿಯಲ್ಲಿ ಕಾವೇರಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂತು   

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಗುರಾವರ ಬಿರುಸಿನ ಮಳೆ ಸುರಿಯಿತು. ಒಂದು ಗಂಟೆ ಕಾಲ ಸುರಿದ ಮಳೆಗೆ ಕೆರೆ, ತೋಡುಗಳು ತುಂಬಿದವು. ಕೊಟ್ಟಮುಡಿ, ಪಾಲೂರು, ಹೊದ್ದೂರು, ಬೆಟ್ಟಗೇರಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆ ಸುರಿಯಿತು.

ನಿರಂತರವಾಗಿ ಸುರಿದ ಮಳೆಯಿಂದ ಸಮೀಪದ ಕೊಟ್ಟಮುಡಿಯ ಕಾವೇರಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡು ಬಂತು. ಹಲವು ದಿನಗಳಿಂದ ಮಳೆ ಇಳಿಮುಖಗೊಂಡಿದ್ದು ಗುರುವಾರ ಸುರಿದ ಮಳೆ ಕೃಷಿಕರಲ್ಲಿ ಭರವಸೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT