ನಾಪೋಕ್ಲು: ಸಮೀಪದ ಬಲಮುರಿ ಗ್ರಾಮದ ಉಪ್ಪುಗುಂಡಿ ಎಂಬಲ್ಲಿರುವ ಈಶ್ವರ ಗುಡಿ ಕಿಡಿಗೇಡಿಗಳ ಕುಕೃತ್ಯಕ್ಕೆ ಸಿಲುಕಿ ಧ್ವಂಸಗೊಂಡಿದೆ.
ಗುಡಿಯಲ್ಲಿದ್ದ ಶಿವಲಿಂಗವನ್ನು ಕಿತ್ತು ಹಾಕಿ ಅಗೆದು ಹುಡುಕಾಟ ನಡೆಸಿರುವುದು ಕಂಡು ಬಂದಿದೆ. ನಿಧಿಯ ಆಸೆಯಿಂದ ಈ ಕೃತ್ಯ ನಡೆಸಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಈ ಲವಣೇಶ್ವರ ದೇವರ ಗುಡಿಗೆ ಹೋಗಲು ಸೂಕ್ತ ರಸ್ತೆ ಇರಲಿಲ್ಲ. ಅಜ್ಞಾತವಾಗಿದ್ದ ಈ ಗುಡಿಯ ಸುತ್ತ ಇಲ್ಲಿಯ ಯುವಕರು ಶಿವರಾತ್ರಿಯ ಸಂದರ್ಭದಲ್ಲಿ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿದ್ದರು..
ಈ ಲವಣೇಶ್ವರ ದೇವರ ಗುಡಿಗೆ ಹೋಗಲು ಸೂಕ್ತ ರಸ್ತೆ ಇರಲಿಲ್ಲ. ಅಜ್ಞಾತವಾಗಿದ್ದ ಈ ಗುಡಿಯ ಸುತ್ತ ಇಲ್ಲಿಯ ಯುವಕರು ಶಿವರಾತ್ರಿಯ ಸಂದರ್ಭದಲ್ಲಿ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.