ADVERTISEMENT

ಶ್ರದ್ಧಾ ಭಕ್ತಿಯ ಚಾಮುಂಡೇಶ್ವರಿ ಉತ್ಸವ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:39 IST
Last Updated 20 ಏಪ್ರಿಲ್ 2017, 6:39 IST

ಸಿದ್ದಾಪುರ: ಇಲ್ಲಿಗೆ ಸಮೀಪದ ಟೀಕ್‌ ವುಡ್ ತೋಟದಲ್ಲಿರುವ ಶ್ರೀ ಚಾಮುಂ ಡೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವವು ಬುಧವಾರ  ಶ್ರದ್ಧಾ ಭಕ್ತಿಯಿಂದ ನಡೆಯಿತು.ಬೆಳಿಗ್ಗೆ ಗಣಪತಿ ಹೋಮ, ಕಲಶ ಶುದ್ಧಿ ಹಾಗೂ  ಚಂಡಿಕಾ ಹೋಮವನ್ನು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತಾಯ ಪದ್ಮ ನಾಭ ತಂತ್ರಿಗಳ ನೇತೃತ್ವದಲ್ಲಿ  ನೆರ ವೇರಿತು. ವಿವಿಧ ಪೂಜಾ ಪ್ರಸಾದ ಗಳೊಂದಿಗೆ ಮಹಿಳೆಯರಿಗೆ ದೇವರ ಸನ್ನಿಧಿಯಲ್ಲಿ ಗಾಜಿನ ಬಳೆಗಳನ್ನು ವಿತರಿಸಲಾಯಿತು.

ಕೇರಳದ ಚೆಂಡೆ ವಾದ್ಯ, ಕೊಡಗಿನ ವಾಲಗ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಅಂಗವಾಗಿ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ವಿದ್ವಾನ್ ಸುಧೀರ್‌ರಾವ್ ಮತ್ತು ಸಂಗಡಿ ಗರಿಂದ ಭರತನಾಟ್ಯ ಪ್ರದರ್ಶನ, ನಂತರ ಆಕರ್ಷಕ ಸಿಡ್ಡಿಮದ್ದು ಪ್ರದರ್ಶನ  ನಡೆಯಿತು.ದೇವಸ್ಥಾನದ ಪ್ರಮುಖರಾದ ಕಂಬೀ ರಂಡ ನಂಜಪ್ಪ ಹಾಗೂ ಕುಟುಂಬಸ್ಥರು ಸೇರಿದಂತೆ ಅನೇಕ ಪ್ರಮುಖರು ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT