ಸಿದ್ದಾಪುರ: ನೆಲ್ಯಹುದಿಕೇರಿ ಬಳಿಯ ಪುರಾತನ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಸೇತುವೆಯ ಇಬ್ಬದ್ದಿಗಳಲ್ಲಿಯೂ ಕಳೆ ಬೆಳೆದು ಗಿಡಗಂಟಿಗಳು ಹಾಗೂ ಕಾಡು ಬಳ್ಳಿಗಳು ಆಕ್ರಮಿಸಿಕೊಂಡಿವೆ.
ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯಬೇಕಿದ್ದ ರಂಧ್ರಗಳನ್ನು ಖಾಸಗಿ ಕಂಪನಿಯೊಂದು ಕೆಲವು ವರ್ಷಗಳ ಹಿಂದೆ ಒಎಫ್ಸಿ ಕೇಬಲ್ ಅಳವಡಿಸುವ ಸಂದರ್ಭ ಮುಚ್ಚಿ ಹಾಕಲಾಗಿದ್ದು ಮಳೆ ನೀರು ಹರಿಯದ ಕಾರಣ ರಸ್ತೆಯ ಮೇಲೆ ನೀರು ನಿಲ್ಲುತಿದೆ. ಸಂಬಂಧಿಸಿದ ಇಲಾಖೆ ಇತ್ತ ಗಮನ ಹರಿಸಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.