ಗಂಗಾವತಿ: ಸಮೀಪದ ಶ್ರೀರಾಮನಗರದ ರವಿ ಪಾನ್ ಅಂಗಡಿಯೊಂದರಲ್ಲಿ ಗ್ರಾಹಕರು ಖರೀದಿಸಿದ ಗುಟ್ಕಾ ಪ್ಯಾಕೇಟ್ನಲ್ಲಿ ಸತ್ತ ಹಲ್ಲಿಯ ಅವಶೇಷ ಪತ್ತೆಯಾಗಿದೆ. ತಕ್ಷಣವೇ ಅವರು ಅದನ್ನು ವಾಪಸ್ ಕೊಟ್ಟು ಬೇರೆ ಪೊಟ್ಟಣ ಪಡೆದಿದ್ದಾರೆ.
ಗ್ರಾಹಕ ವಿಷ್ಣು ಮಾತನಾಡಿ, ಗ್ರಾಹಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಮತ್ತು ಅಲಕ್ಷ್ಯದಿಂದ ಆಹಾರ ಉತ್ಪನ್ನಗಳನ್ನು ಪ್ಯಾಕಿಂಗ್ ಮಾಡುವ ಇಂತಹ ಕಂಪೆನಿಗಳ ವಿರುದ್ಧ ಸಂಬಂಧಿತ ಆಹಾರ ಮತ್ತು ಸುರಕ್ಷತಾ ಅಧಿಕಾರಿಗಳು ಕೂಡಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಂಗಡಿ ಮಾಲಿಕ ಗುರು ಲಮಾಣಿ, ಸೂಪರ್ಗುಡ್ ಎಂಬ ಸಗಟು ಅಂಗಡಿಯಿಂದ ಗುಟ್ಕಾ ಖರೀದಿಸಿ ಚಿಲ್ಲರೆಯಾಗಿ ಮಾರಾಟ ಮಾಡಲಾಗಿದೆ. ಗ್ರಾಹಕ ಕೊಂಡ ಪ್ಯಾಕೇಟ್ನಲ್ಲಿ ಹಲ್ಲಿ ಪತ್ತೆಯಾಗಿದೆ. ಆಹಾರ ಇಲಾಖೆಯ ಅಧಿಕಾರಿಗಳು ಕೇಳಿದರೆ ಅದರ ಮಾದರಿ ಕೊಡಲು ಸಿದ್ಧ. ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.