ಮುನಿರಾಬಾದ್ (ಕೊಪ್ಪಳ ಜಿಲ್ಲೆ): ಕನ್ನಡ ಚಲನಚಿತ್ರ ನಟ, ಬಳ್ಳಾರಿ ಜಿಲ್ಲೆ ಹೊಸಪೇಟೆಯ ಮೂಲದ ಅಜಯರಾವ್ ಅವರು ಇಲ್ಲಿಗೆ ಸಮೀಪದ ಹುಲಿಗಿ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಸಪ್ನಾ ಅವರನ್ನು ಶಾಸ್ತ್ರೋಕ್ತವಾಗಿ ವರಿಸಿದರು.
ಹುಲಿಗಿಯ ಹುಲಿಗೆಮ್ಮದೇವಿಯು ರಾವ್ ಅವರ ಮನೆ ದೇವರು ಆಗಿರುವುದರಿಂದ ಮದುವೆಯನ್ನು ಹುಲಿಗೆಮ್ಮದೇವಿ ಸಾನಿಧ್ಯದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೊಸಪೇಟೆಯವರೆ ಆದ ಅಜಯರಾವ್ ಅವರ ತಂದೆ ಸಂಡೂರಿನ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದರು. ಮೂರು ವರ್ಷಗಳಿಂದ ಈ ಕುಟುಂಬವು ಬೆಂಗಳೂರಿನಲ್ಲಿ ವಾಸಿಸುತ್ತಿದೆ. ಅಜಯರಾವ್ ಬಾಳಸಂಗಾತಿಯಾದ ಸಪ್ನಾ ಅವರು ಕೂಡಾ ಹೊಸಪೇಟೆಯವರು.
ಚಲನಚಿತ್ರ ನಿರ್ದೇಶಕ ಶಶಾಂಕ್, ರಾಜಕಾರಣಿ ಕಾಪು ಸಿದ್ದಲಿಂಗಯ್ಯಸ್ವಾಮಿ, ದೇವಸ್ಥಾನ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ನಟ ಅಜಯರಾವ್ ಅವರ ಆಪ್ತ ಗೆಳೆಯರು ಮತ್ತು ಎರಡೂ ಕುಟುಂಬದ ಬಂಧುಗಳು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಪಾದಭಟ್ಟ ಜೋಷಿ ಅರ್ಚಕವೃಂದ ಕಲ್ಯಾಣ ಕಾರ್ಯ ನೆರವೇರಿಸಿದರು.
ಕನ್ನಡ ಚಿತ್ರಗಳಾದ ‘ಎಕ್ಸ್ಕ್ಯೂಸ್ ಮಿ’, ‘ಕೃಷ್ಣನ್ ಲವ್ಸ್ಟೋರಿ’, ‘ತಾಜ್ಮಹಲ್’, ಬ್ರೇಕಿಂಗ್ನ್ಯೂಸ್’, ‘ಪ್ರೇಮ್ಕಹಾನಿ’ ಮುಂತಾದ ಚಿತ್ರಗಳಲ್ಲಿ ಅಜಯ್ರಾವ್ ಅವರು ನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.