ADVERTISEMENT

ಮುಂದುವರಿದ ಹಕ್ಕಿಗಳ ಅಸ್ವಸ್ಥತೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 6:48 IST
Last Updated 8 ಫೆಬ್ರುವರಿ 2018, 6:48 IST
ಭಾರತೀನಗರ ಸಮೀಪದ ಕೊಕ್ಕರೆಬೆಳ್ಳೂರಿನಲ್ಲಿ  ಅಸ್ವಸ್ಥಗೊಂಡಿರುವ ಕೊಕ್ಕರೆಗಳಿಗೆ ಆರೈಕೆ ಮಾಡುತ್ತಿರುವುದು
ಭಾರತೀನಗರ ಸಮೀಪದ ಕೊಕ್ಕರೆಬೆಳ್ಳೂರಿನಲ್ಲಿ ಅಸ್ವಸ್ಥಗೊಂಡಿರುವ ಕೊಕ್ಕರೆಗಳಿಗೆ ಆರೈಕೆ ಮಾಡುತ್ತಿರುವುದು   

ಭಾರತೀನಗರ: ಸಮೀಪದ ಕೊಕ್ಕರೆಬೆಳ್ಳೂರಿನಲ್ಲಿ ಕೊಕ್ಕರೆಗಳ ಸಾವಿನ ಸರಣಿ ಮುಂದುವರೆದಿದೆ. ಭಾನುವಾರ ಅಸ್ವಸ್ಥಗೊಂಡು ಮರದಿಂದ ಕೆಳಕ್ಕುರುಳಿದ್ದ 2 ಕೊಕ್ಕರೆಗಳು ಮೃತಪಟ್ಟಿವೆ. ಇದರಿಂದ ಇದುವರೆಗೆ ಕೊಕ್ಕರೆಗಳ ಸಾವಿನ ಸಂಖ್ಯೆ 23ಕ್ಕೇರಿದೆ. ಸೋಮವಾರ ಎರಡು ಮತ್ತು ಮಂಗಳವಾರ ಮತ್ತೆರಡು ಕೊಕ್ಕರೆಗಳು ಅಸ್ವಸ್ಥಗೊಂಡು ಮರದಿಂದ ಕೆಳಕ್ಕುರುಳಿವೆ.

ಅಸ್ವಸ್ಥಗೊಂಡಿರುವ 4 ಕೊಕ್ಕರೆಗಳನ್ನು ಪಶುವೈದ್ಯ ಡಾ.ಸತೀಶ್‌, ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಬಿ.ಲಿಂಗೇಗೌಡ, ಅರಣ್ಯ ವೀಕ್ಷಕ ಲೋಕೇಶ್‌ ಅವರು ಪಕ್ಷಿ ಕೇಂದ್ರದಲ್ಲಿಟ್ಟು ಪೋಷಣೆ ಮಾಡುತ್ತಿದ್ದಾರೆ.

ಅಸ್ವಸ್ಥಗೊಂಡಿರುವ ಕೊಕ್ಕರೆಗಳು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ದಿನಗಳೆದಂತೆ ಅವು ಕೂಡ ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎಂದು ಹೆಜ್ಜಾರ್ಲೆ ಲಿಂಗೇಗೌಡ ಹೇಳಿದರು. ಇಂದು ಅಧಿಕಾರಿಗಳ ಭೇಟಿ: ಫೆ. 8ರಂದು ಅರಣ್ಯ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಹಿರಿಯ ಅಧಿಕಾರಿಗಳು ಕೊಕ್ಕರೆ ಬೆಳ್ಳೂರಿಗೆ ಭೇಟಿ ನೀಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.