ADVERTISEMENT

ಬಡ್ತಿ ಮೀಸಲಾತಿ ಉಳಿಸಿಕೊಳ್ಳಲು ಶ್ರಮಿಸಲಿ

ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ ಮುಖಂಡ ಅಡಗೂರು ಎಚ್.ವಿಶ್ವನಾಥ್ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:50 IST
Last Updated 13 ಮಾರ್ಚ್ 2017, 6:50 IST
ಮೈಸೂರಿನ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಭಾನುವಾರ ನಡೆದ ‘ಬಡ್ತಿ ಮೀಸಲಾತಿ’ ವಿಚಾರಸಂಕಿರಣದಲ್ಲಿ ಪ್ರೊ.ಸಿ.ಬಸವರಾಜು, ಪ್ರೊ.ಕೆ.ಎಸ್.ಭಗವಾನ್‌, ಪ್ರೊ.ದಯಾನಂದ ಮಾನೆ, ಅಡಗೂರು ಎಚ್‌.ವಿಶ್ವನಾಥ್‌, ಪ್ರೊ.ಶಬ್ಬೀರ್ ಮುಸ್ತಫಾ, ಸಿದ್ದಬಸವಯ್ಯ ಇದ್ದಾರೆ
ಮೈಸೂರಿನ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಭಾನುವಾರ ನಡೆದ ‘ಬಡ್ತಿ ಮೀಸಲಾತಿ’ ವಿಚಾರಸಂಕಿರಣದಲ್ಲಿ ಪ್ರೊ.ಸಿ.ಬಸವರಾಜು, ಪ್ರೊ.ಕೆ.ಎಸ್.ಭಗವಾನ್‌, ಪ್ರೊ.ದಯಾನಂದ ಮಾನೆ, ಅಡಗೂರು ಎಚ್‌.ವಿಶ್ವನಾಥ್‌, ಪ್ರೊ.ಶಬ್ಬೀರ್ ಮುಸ್ತಫಾ, ಸಿದ್ದಬಸವಯ್ಯ ಇದ್ದಾರೆ   

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಬಡ್ತಿ ಮೀಸಲಾತಿಯನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಜವಾಬ್ದಾರಿ ಹೊರಬೇಕು ಎಂದು ಕಾಂಗ್ರೆಸ್‌ ಮುಖಂಡ ಅಡಗೂರು ಎಚ್.ವಿಶ್ವನಾಥ್ ಸಲಹೆ ನೀಡಿದರು.

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿಕಾರಿ ಗಳ, ನೌಕರರ ಪರಿಷತ್ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿ ಸಿದ್ದ ‘ಬಡ್ತಿ ಮೀಸಲಾತಿ’ ವಿಚಾರ ಸಂಕಿ ರಣದಲ್ಲಿ ಅವರು ಮಾತನಾಡಿದರು.

ಬಡ್ತಿ ಮೀಸಲಾತಿಯನ್ನು ದೇವರಾಜ ಅರಸು ಅವರು ನೀಡಿದ್ದರು. ಅದನ್ನು ರಕ್ಷಿಸಬೇಕಾದ್ದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಸುಪ್ರೀಂ ಕೋರ್ಟಿನ ತೀರ್ಪನ್ನು ರಾಜ್ಯ ಸರ್ಕಾರವು ಪ್ರಶ್ನಿಸಿ ಮೀಸಲಾತಿಯನ್ನು ಉಳಿಸಿಕೊಳ್ಳುವ ಗಂಭೀರ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಈ ಬಗ್ಗೆ ಮುಖ್ಯಮಂತ್ರಿ ಕಾನೂನು ಸಚಿವರಿಗೆ ಸೂಚನೆ ನೀಡಬೇಕು. ಕಾನೂನು ಸಚಿವ, ಕಾನೂನು ಕಾರ್ಯ ದರ್ಶಿಗಳೊಂದಿಗೆ ಚರ್ಚಿಸಿ ನಿರ್ಣಯ ಗಳನ್ನು ತೆಗೆದುಕೊಳ್ಳಬೇಕು. ಬಡ್ತಿ ಮೀಸ ಲಾತಿ ಕೇವಲ ದಲಿತರಿಗೆ ಮಾತ್ರವಲ್ಲ ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾ ತರಿಗೂ ಸಿಗಬೇಕು ಎಂದರು.

ಸಂಕಿರಣ ಉದ್ಘಾಟಿಸಿದ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ ಮಾತನಾಡಿ, ಖಾಸಗಿ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್ ಮುಗಿಸಿದ  ದಲಿತರಿಗೆ ಉದ್ಯೋಗ ಸಿಗುತ್ತಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ದಲಿತ ಹಿಂದುಳಿದ ವರ್ಗಗಳಿಗೆ ಸಿಗುತ್ತಿದ್ದ ಗ್ರೂಪ್ ‘ಡಿ’ ನೌಕರಿಯನ್ನು ಖಾಸಗೀಕರಣ ಮಾಡಿ ಗುತ್ತಿಗೆ ನೀಡುತ್ತಿರುವುದು ಅಪಾಯದ ಸಂಗತಿ ಎಂದು ದೂರಿದರು.

ಮೈಸೂರು ವಿ.ವಿ ಕಾನೂನು ಅಧ್ಯ ಯನ ವಿಭಾಗದ ಪ್ರಾಧ್ಯಾಪಕ ಸಿ.ಬಸವ ರಾಜು ವಿಚಾರ ಮಂಡಿಸಿದರು. ಮೈಸೂರು ವಿ.ವಿ ಪ್ರಭಾರ ಕುಲಪತಿ ಪ್ರೊ. ದಯಾನಂದ ಮಾನೆ, ಪ್ರೊ.ಶಬ್ಬೀರ್ ಮುಸ್ತಫಾ, ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ಪ್ರಾಧ್ಯಾಪಕ ಪ್ರೊ.ಮಹೇಶ ಚಂದ್ರ ಗುರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.