ADVERTISEMENT

ಸಂತೋಷದ ಅಲೆಯಲ್ಲಿ ತೇಲಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 8:23 IST
Last Updated 23 ಸೆಪ್ಟೆಂಬರ್ 2017, 8:23 IST

ಮೈಸೂರು: ಕೂರಲೂ ಜಾಗವಿಲ್ಲದಂತೆ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಹರ್ಷೋದ್ಗಾರದ್ದೇ ಸದ್ದು. ಮಕ್ಕಳ ಕೇಕೆ, ನಗುವಿನ ಅಲೆ ಮೂಡಿ ಬರುತ್ತಿದ್ದುದು ದಸರಾ ಮಹೋತ್ಸವದ ಅಂಗವಾಗಿ ಇಲ್ಲಿನ ಜಗನ್ಮೋಹನ ಅರಮನೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ.

ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಕ್ಕಳಾದ ಮಹೇಂದ್ರ, ಅರಿಷಿ, ಅಮಿತ್‌ ಇತರರು ಪ್ರಹಸನಗಳ ಡೈಲಾಗ್‌ ಹೇಳುತ್ತಿದ್ದರೆ ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆಯೇ ಆಯಿತು.

ಸರಿಗಮಪ ಜೂನಿಯರ್‌ ಖ್ಯಾತಿಯ ವೈಷ್ಣವಿ ‘ಅಪ್ಪಾ.... ಐ ಲವ್‌ ಯೂ ಪಾ’ ಹಾಡನ್ನು ಹೇಳುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದರು. ಕಿರುತೆರೆಯ ಬಾಲ ನಟಿ ದೀಕ್ಷಾ ಮುದ್ದಾದ ಮಾತುಗಳ ಮೂಲಕ ಎಲ್ಲರನ್ನು ಆಕರ್ಷಿಸಿದಳು.

ADVERTISEMENT

ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಜ್ಞಾನ ಮಾದರಿಗಳು, ಕರಕುಶಲು ವಸ್ತುಗಳು ಆಕರ್ಷಿಸಿದವು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಚಿವ ತನ್ವೀರ್‌ ಸೇಠ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.