ADVERTISEMENT

‘ಸಂವಿಧಾನ ಒಪ್ಪದ ಮಠಾಧೀಶರ ತಿರಸ್ಕರಿಸಿ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 9:03 IST
Last Updated 6 ಡಿಸೆಂಬರ್ 2017, 9:03 IST

ಸಿಂಧನೂರು: ‘ದೇಶದ ಸಂವಿಧಾನವನ್ನು ಒಪ್ಪದ ಮಠಾಧೀಶ ಪೇಜಾವರಶ್ರೀ ದೇಶವನ್ನು ಪ್ರೀತಿಸಲಾರರು. ಅಂಥವರ ಹೇಳಿಕೆಯನ್ನು ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಬೇಕು’ ಎಂದು ಅಂಬೇಡ್ಕರ್ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಪಟ್ಟಿ ಕರೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿಸೋಮವಾರ ಏರ್ಪಡಿಸಿದ್ದ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸಹಸ್ರಾರು ವರ್ಷಗಳಿಂದ ದಲಿತರನ್ನು ಊರ ಹೊರಗಿಟ್ಟು, ಪ್ರಾಣಿಗಳಿಗಿಂತಲೂ ಕನಿಷ್ಠ ರೀತಿಯಿಂದ ಕಂಡಿರುವ ಸರ್ವಣೀಯರು ದಲಿತರ ಏಳ್ಗೆಯನ್ನು ಸಹಿಸದೆ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಆರೋಪಸಿದರು.

ADVERTISEMENT

ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಸೇನಪ ಅಮರಾಪೂರ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಭೀಮಣ್ಣ, ಮಹೇಶಕುಮಾರ, ವೆಂಕಟೇಶ ದಿನ್ನಿ, ತಾಲ್ಲೂಕು ಘಟಕದ ಅಧ್ಯಕ್ಷ ನಿರುಪಾದಿ ಸಾಸಲಮರಿ, ಪ್ರಧಾನ ಕಾರ್ಯದರ್ಶಿ ಬಸವರಾಜ, ಉಪಾಧ್ಯಕ್ಷ ವೀರೇಶ ಬೂದಿವಾಳಕ್ಯಾಂಪ್, ಬಾಲರಾಜ, ಸಂಘಟನಾ ಕಾರ್ಯದರ್ಶಿ ನಾಗರಾಜ ಗವಿಮನಿ, ಖಜಾಂಚಿ ಶರಣಬಸವ ಮಲ್ಕಾಪುರ, ನಾಗಲಿಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.