ADVERTISEMENT

ಮುಳಕಟ್ಟಮ್ಮ ದೇವಿಗೆ ಪೂಜೆ ಸಲ್ಲಿಸಿದ ಪರಮೇಶ್ವರ್ ದಂಪತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 9:02 IST
Last Updated 14 ಮಾರ್ಚ್ 2018, 9:02 IST

ತಿಪ್ಪಸಂದ್ರ(ಮಾಗಡಿ): ಮುಳಕಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರ ಪತ್ನಿ ಕನ್ನಿಕಾ ಮಹಿಳೆಯರೊಂದಿಗೆ ಹೂವು - ಹೊಂಬಾಳೆ ಆರತಿ ಹೊತ್ತು ದೇವರಿಗೆ ಹರಕೆ ಸಲ್ಲಿಸಿದರು.

ವಿವಿಧ ಜನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ಶಾಸಕ ಎಚ್‌.ಸಿ.ಬಾಲಕೃಷ್ಣ, ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ನೆಲಮಂಗಲದ ಡಿ.ಎಂ.ಪ್ರಕಾಶ್‌, ಮುಖಂಡರಾದ ಪುಟ್ಟರಾಜು, ಧನಂಜಯ, ಗಂಗಾಧರ್‌, ರಂಗಣ್ಣ.ಕೆ ಹಾಗೂ ಭಕ್ತರು ಇದ್ದರು. ಪರಮೇಶ್ವರ್‌ ಕುಟುಂಬ ಭಕ್ತರಿಗೆ ಅನ್ನದಾನ ವ್ಯವಸ್ಥೆ ಏರ್ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT