ADVERTISEMENT

ರಾಮನಗರ ತಾಲ್ಲೂಕು ಮನಗಾನಹಳ್ಳಿ ಬಳಿ ಕೆರೆಗೆ ಬಿದ್ದ ಕಾರು: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 7:24 IST
Last Updated 19 ಅಕ್ಟೋಬರ್ 2017, 7:24 IST
ರಾಮನಗರ ತಾಲ್ಲೂಕು ಮನಗಾನಹಳ್ಳಿ ಬಳಿ ಕೆರೆಗೆ ಬಿದ್ದ ಕಾರು: ಮೂವರು ಸಾವು
ರಾಮನಗರ ತಾಲ್ಲೂಕು ಮನಗಾನಹಳ್ಳಿ ಬಳಿ ಕೆರೆಗೆ ಬಿದ್ದ ಕಾರು: ಮೂವರು ಸಾವು   

ರಾಮನಗರ: ತಾಲ್ಲೂಕಿನ ಮನಗಾನಹಳ್ಳಿ ಬಳಿ ಬುಧವಾರ ರಾತ್ರಿ ಕಾರು ಕೆರೆಗೆ ಉರುಳಿಬಿದ್ದು, ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಕನಕಪುರ ತಾಲೂಕಿನ ಗೊಟ್ಟಿಗೆಹಳ್ಳಿ ಗ್ರಾಮದವರಾದ ಚಿದಾನಂದ್ (24), ಶಶಾಂಕ್ (6), ಇಂಪನಾ(4)  ಮೃತರು.

‌ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಬಾಲಕ ದಿಲೀಪ್ (12) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಕ್ಕದ‌ ಕೆರೆಗೆ ಉರುಳಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.