ರಾಮನಗರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾ ಭಸ್ಮವನ್ನು ಇಲ್ಲಿನ ಐಜೂರು ವೃತ್ತದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಗುರುವಾರ ಬರ ಮಾಡಿಕೊಳ್ಳಲಾಯಿತು.
ವಾಜಪೇಯಿ ಅವರ ನೂರಾರು ಅಭಿಮಾನಿಗಳು ಅಸ್ಥಿಗೆ ಪುಷ್ಪಾರ್ಚನೆ ಮಾಡಿದರು. ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಇದನ್ನು ವಿಸರ್ಜಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಆರ್. ಅಶೋಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್, ಪದಾಧಿಕಾರಿಗಳಾದ ಜಯಣ್ಣ, ಎಸ್.ಆರ್. ನಾಗರಾಜು, ರುದ್ರದೇವರು, ಚಂದನ್ ಮೋರೆ, ಚನ್ನಪ್ಪ, ವಿನೋದ್, ಪ್ರವೀಣ್ಗೌಡ, ಕೆ. ಲೋಕೇಶ್, ಜಿ.ವಿ. ಪದ್ಮನಾಭ್, ಮಂಜು, ಚಂದ್ರಶೇಖರರೆಡ್ಡಿ, ಆರ್.ಕೆ. ಸತೀಶ್, ವರದರಾಜುಗೌಡ, ಬಾಲು ವೆಂಕಟೇಶ್, ವೆಂಕಟೇಶ್, ವಿ.ಎಚ್.ರಾಜು ಇದ್ದರು.
ಬಿಡದಿಯ ಬಿಜಿಎಸ್ ವೃತ್ತದಲ್ಲೂ ಅಭಿಮಾನಿಗಳು ವಾಜಪೇಯಿ ಅವರ ಚಿತಾ ಭಸ್ಮಕ್ಕೆ ಪುಷ್ಪಾರ್ಚನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.