ಪಾವಗಡ: ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆಂಧ್ರಪ್ರದೇಶದ ರೊದ್ದಂ ಮಂಡಲಂ ರಾಸೂರು ಗ್ರಾಮದ ಸತ್ಯನಾರಾಯಣ (55) ಎಂಬಾತ ಶುಕ್ರವಾರ ಕರ್ತವ್ಯ ನಿರತ ಕಾನ್ಸ್ಟೆಬಲ್ ಶಿವನೇಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಸತ್ಯನಾರಾಯಣ ಮದ್ಯ ಸೇವಿಸಿ ಸಾರ್ವಜನಿಕವಾಗಿ ಕೂಗಾಡುತ್ತಿದ್ದ. ಈ ವೇಳೆ ಶಿವನೇಗೌಡ ‘ಗಲಾಟೆ ಮಾಡಬೇಡ’ ಎಂದು ಸೂಚಿಸಿದ್ದಾರೆ. ಇದರಿಂದ ಕುಪಿತಗೊಂಡ ಆತ ಕಾನ್ಸ್ಟೆಬಲ್ ಮೇಲೆ ಎರಗಿದ್ದಾನೆ. ಸಾರ್ವಜನಿಕರು ಕಾನ್ಸ್ಟೆಬಲ್ ನೆರವಿಗೆ ಧಾವಿಸಿದ್ದಾರೆ.ಸತ್ಯನಾರಾಯಣನನ್ನು ಪೊಲೀಸರು ಬಂಧಿಸಿದಾಗ ಆತನ ಬಳಿ ಚಾಕು ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.