ADVERTISEMENT

ನಾಳೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 28 ಮೇ 2016, 4:36 IST
Last Updated 28 ಮೇ 2016, 4:36 IST

ಉಡುಪಿ: ಕರ್ನಾಟಕ ಬೋರ್ಡ್‌ ಆಫ್‌ ಇಸ್ಲಾಮಿಕ್‌ ಎಜುಕೇಶನ್‌ನ 2015–16ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಇದೇ 29ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಜಾಮಿಯಾ ಮಸೀದಿಯ ಸಭಾಭವನದಲ್ಲಿ ನಡೆಯಲಿದೆ. 

ಉಡುಪಿ ಹಾಗೂ ಆಸುಪಾಸಿನ ಕೇಂದ್ರಗಳಾದ ಆದಿ ಉಡುಪಿ, ಕುಕ್ಕಿಕಟ್ಟೆ, ಕುಂದಾಪುರ, ಕಂಡ್ಲೂರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈ ಸಂದರ್ಭದಲ್ಲಿ ರಾಜ್ಯಮಟ್ಟದ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳಾದ ಆಸಿಯಾ ಕೌಸರ್‌ ಹಾಗೂ ಸಿಯಾನಾ ಅವರನ್ನು ಸನ್ಮಾನಿಸಲಾಗುವುದು.

ಕರ್ನಾಟಕ ಬೋರ್ಡ್‌ ಆಫ್‌ ಇಸ್ಲಾಮಿಕ್‌ ಎಜುಕೇಶನ್‌ನ ಉಪಾಧ್ಯಕ್ಷ ಸಯ್ಯದ್‌ ತನ್ವೀರ್‌ ಅಧ್ಯಕ್ಷತೆಯನ್ನು ವಹಿಸುವರು. ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಡಾ. ಅಬ್ದುಲ್‌ ಅಝೀಝ್‌, ಜಮಾಅತೆ ಇಸ್ಲಾಮಿ ಹಿಂದ್‌ ಜಿಲ್ಲಾ ಸಂಚಾಲಕಿ ಹುಮೈರಾ ಕಾರ್ಕಳ ಅತಿಥಿಗಳಾಗಿ ಬರುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.