ಅಂಕೋಲಾ: ತಾಲ್ಲೂಕಿನ ಕೋಡ್ಸಣಿ ಗಂಗಾವಳಿ ನದಿಯಲ್ಲಿ ಮರಳು ತೆಗೆಯಲು ದೋಣಿಯಲ್ಲಿ ತೆರಳಿದ್ದ ಕಾರ್ಮಿಕ ಬಿಹಾರ ಸನಕಿ ಮಾತೋ (30) ಬುಧವಾರ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮಂಕಾಳು ಗೌಡ ಎಂಬು ವರಿಗೆ ಸೇರಿದ ಮರಳು ತೆಗೆಯುವ ದೋಣಿಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದರು. ದೋಣಿಯ ಮೋಟಾರ್ ಚಾಲು ಮಾಡುತ್ತಿದ್ದ ವೇಳೆ ಅವರು ಕುತ್ತಿಗೆಗೆ ಹಾಕಿಕೊಂಡಿದ್ದ ಟವಲ್ ಮೆಷಿನ್ಗೆ ಸಿಲುಕಿ, ಕುತ್ತಿಗೆಯ ಭಾಗ ಯಂತ್ರಕ್ಕೆ ತಾಕಿದೆ.
ಪರಿಣಾಮ ಗಂಭೀರ ಗಾಯಗೊಂಡು ನದಿಗೆ ಆಯತಪ್ಪಿ ಬಿದ್ದರು. ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಕೊನೆಯುಸಿರೆಳೆದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.