ADVERTISEMENT

ಕೊಲ್ಹಾರ: ಶಿಕ್ಷಕರ ವೇದಿಕೆ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 6:42 IST
Last Updated 16 ಡಿಸೆಂಬರ್ 2017, 6:42 IST

ಇಂಡಿ: ‘ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಮೌನವಾಗಿದ್ದೆ. ಈಚೆಗೆ ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ, ರಾಜ್ಯ ಬಿಜೆಪಿ ನಾಯಕರ ಸೂಚನೆ ಮೇರೆಗೆ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಲು ಮುಂದಾಗಿದ್ದೇನೆ’ ಎಂದು ಮಾಜಿ ಶಾಸಕ ಸಾರ್ವಭೌಮ ಬಗಲಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯೋಜನೆಯಂತೆ ಮತಕ್ಷೇತ್ರದ ಪ್ರತಿ ಬೂತ್‌ಗಳಿಗೆ ಭೇಟಿ ನೀಡಿ ಪಕ್ಷ ಬಲಪಡಿಸುವ ಮೂಲಕ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ’ ಎಂದರು.

‘ಪಕ್ಷದ ನಿಯಮದಂತೆ ವರಿಷ್ಠರು ಪ್ರತಿ ಮತ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡುತ್ತಾರೆ. ನಮ್ಮ ಮತ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆದುಕೊಂಡವರ ಗೆಲ್ಲಿಸಲು ಸರ್ವ ಪ್ರಯತ್ನ ಮಾಡಲು ಸಿದ್ದನಾಗಿದ್ದೇನೆ’ ಎಂದೂ ತಿಳಿಸಿದರು.

ADVERTISEMENT

ಶ್ರೀಮಂತ ಕಾಪಸೆ, ಬಸವರಾಜ ಬೋಂದರ್ಡೆ, ಬಸವರಾಜ ದೇವರ, ಶಾಂತು ಶಿರಕನಹಳ್ಳಿ, ಮಲ್ಲು ಹಾವಿನಾಳ, ಮರೆಪ್ಪ ಗಿರಣಿವಡ್ಡರ, ಶಿವು ಕುಂಬಾರ, ಯಮುನಾಜಿ ಸಾಳುಂಕೆ, ಮಲ್ಲು ಗುಂಡ್ಲ, ದೇವೇಂದ್ರ ಕುಂಬಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.