ADVERTISEMENT

ಮುಂದುವರೆದ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:49 IST
Last Updated 18 ನವೆಂಬರ್ 2017, 9:49 IST
ಬಸವನಬಾಗೇವಾಡಿಯಲ್ಲಿ ಸರದಿ
ಬಸವನಬಾಗೇವಾಡಿಯಲ್ಲಿ ಸರದಿ   

ಬಸವನಬಾಗೇವಾಡಿ: ಪಟ್ಟಣದಲ್ಲಿ ಶುಕ್ರವಾರವೂ ರೋಗಿಗಳು ಪರದಾಡಿದರು. ತಾಲ್ಲೂಕಿನ ವಿವಿಧ ಗ್ರಾಮದ ಜನರು ಇಂದಾದರೂ ಖಾಸಗಿ ಆಸ್ಪತ್ರೆ ತೆರೆಯುತ್ತವೆ ಎಂದು ಆಸ್ಪತ್ರೆಗೆ ಬಂದಿದ್ದರು ಆದರೆ ಕೆಲಹೊತ್ತು ಆಸ್ಪತ್ರೆ ಮುಂದೆ ಕುಳಿತು ಸರ್ಕಾರಿ ಆಸ್ಪತ್ರೆಯತ್ತ ತೆರಳಿದರು. 

ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಕೆಲವರಿಗೆ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದ್ದೇವೆ ಎಂದು ಕೆಲ ಖಾಸಗಿ ವೈದ್ಯರು ತಿಳಿಸಿದರು. ಪಟ್ಟಣ ಸೇರಿದಂತೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 1,672 ಹೊರ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹೇಶ ನಾಗರಬೆಟ್ಟ ತಿಳಿಸಿದರು.

ಆರೋಪ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿಂದ  ಚಿಕಿತ್ಸೆ ಸಿಗುತ್ತಿಲ್ಲ ಎಂದು ಇವಣಗಿ ಗ್ರಾಮದ ಸಿದ್ದಮ್ಮ ಚಲವಾದಿ ಅಲವತ್ತು ಕೊಂಡರು. ನಾಲ್ಕೈದು ಆಸ್ಪತ್ರೆಗೆ ಅಲೆದೆ, ವೈದ್ಯರ ಮುಷ್ಕರ ಮುಂದುವರಿದೆ ಎಂದು ಸವಳಹಳ್ಳ ತಾಂಡಾದ ಖುಬು ಚವ್ಹಾಣ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.