ADVERTISEMENT

21ಸಾವಿರ ಕ್ಯುಸೆಕ್‌ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 7:02 IST
Last Updated 1 ಸೆಪ್ಟೆಂಬರ್ 2017, 7:02 IST
ಹುಣಸಗಿ ಸಮೀಪದ ನಾರಾಯಣಪುರ ಬಸವಸಾಗರದಿಂದ  ಕೃಷ್ಣಾ ನದಿಗೆ ಕ್ರಷ್ಟಗೇಟ್‌ ಮೂಲಕ ನೀರು ಹರಿಬಿಡಲಾಯಿತು
ಹುಣಸಗಿ ಸಮೀಪದ ನಾರಾಯಣಪುರ ಬಸವಸಾಗರದಿಂದ  ಕೃಷ್ಣಾ ನದಿಗೆ ಕ್ರಷ್ಟಗೇಟ್‌ ಮೂಲಕ ನೀರು ಹರಿಬಿಡಲಾಯಿತು   

ಹುಣಸಗಿ: ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯ ಮತ್ತೊಮ್ಮೆ ಭರ್ತಿಯಾಗಿದ್ದು, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಮಂದಹಾಸ ಮೂಡಿದೆ.
ಮಹಾರಾಷ್ಟ್ರದ ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ನಾರಾಯಣಪುರ ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದೆ.

‘ಗುರುವಾರ ಮಧ್ಯಾಹ್ನದಿಂದ ಜಲಾಶಯದ 3 ಕ್ರಸ್ಟ್‌ಗೇಟ್‌ಗಳನ್ನು ಎತ್ತುವ ಮೂಲಕ 21 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ’ ಎಂದು ನಿಗಮದ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ತಂಬಿದೊರೈ ತಿಳಿಸಿದರು.

ಎರಡು ವಾರಗಳಿಂದ ನೀರಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ನೀರಿಗಾಗಿ 12 ದಿನ ಅಹೋರಾತ್ರಿ ಧರಣಿ ನಡೆದಿತ್ತು. ನಾರಾಯಣಪುರ ಮತ್ತು ಆಲಮಟ್ಟಿ ಅವಳಿ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ರೈತರ ನೆಮ್ಮದಿ ತಂದಿದೆ. ಜುಲೈ 30ರಂದು ಸಹ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.