ಬೆಂಗಳೂರು: ‘ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷದಲ್ಲಿ ಮತ್ತೆ ಗುರುತಿಸಿಕೊಳ್ಳುತ್ತಿರುವುದು ಹತ್ತು ಆನೆಯಷ್ಟು ಬಲ ಬಂದಂತಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಈಚೆಗೆ ಮೊಳಕಾಲ್ಮುರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ನಾಮಪತ್ರ ಸಲ್ಲಿಸಿದ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಹೇಳಿದರು.
ಇದೇ ವೇಳೆ ಜನಾರ್ದನ ರೆಡ್ಡಿ ಮಾತನಾಡಿ, ‘ದುರಾಡಳಿತ ಮೂಲಕ ಸಿದ್ದರಾಮಯ್ಯ ‘ಸಿದ್ದರಾವಣ’ನಾಗಿ ಹೊರಹೊಮ್ಮಿದ್ದಾರೆ. ಇವರ ಸಂಹಾರವನ್ನು ಶ್ರೀರಾಮುಲು ಮಾಡಲಿದ್ದು, ಇದಕ್ಕೆ ಮೊಳಕಾಲ್ಮುರಿನ ಮತದಾರರು ಬೆಂಬಲಿಸಬೇಕು’ ಎಂದು ಮನವಿ ಮಾಡಿದ ಅವರು, ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಅವರ ಕುರ್ಚಿ ಬಳಿಯೇ ‘ಲಕ್ಷ್ಮಿ’ ಇದ್ದಳು. ಇದರಿಂದ ಹತ್ತಾರು ಯೋಜನೆಗಳಿಗೆ ಜೀವ ಸಿಕ್ಕಿತು ಎಂದು ಹೇಳಿದ್ದರು.
ಈ ಎಲ್ಲಾ ಅಶಂಗಳು ಹಾಗೂ ಬಿಜೆಪಿ ಪ್ರಚಾರಕ್ಕೆ ಪಕ್ಷದ ಐಕಾನ್ ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿರುವುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯದ ದಾಟಿಯಲ್ಲಿ ಟ್ವೀಟ್ವೊಂದನ್ನು ಮಾಡಿದ್ದಾರೆ.
‘ನಾನು ಮೇ 1ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಭ್ರಷ್ಟಾಚಾರದ ಮೇಲಿನ ‘ಗುಡುಗಿನ ಭಾಷಣ’ವನ್ನು ಎದುರು ನೋಡುತ್ತೇನೆ!’ ಎಂಬ ವ್ಯಂಗ್ಯದ ಮಾತು ಹಾಗೂ ಕಾರ್ಟೂನ್ನೊಂದಿಗೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.