ADVERTISEMENT

ತುರುವೇಕೆರೆ: ಜೆಡಿಎಸ್ ಶಾಸಕರ ಬೆಂಬಲಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 11:17 IST
Last Updated 11 ಫೆಬ್ರುವರಿ 2018, 11:17 IST
ತುರುವೇಕೆರೆ: ಜೆಡಿಎಸ್ ಶಾಸಕರ ಬೆಂಬಲಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ
ತುರುವೇಕೆರೆ: ಜೆಡಿಎಸ್ ಶಾಸಕರ ಬೆಂಬಲಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ   

ತುರುವೇಕೆರೆ:  ತಾಲ್ಲೂಕಿನ ಅಮ್ಮಸಂದ್ರ ಬಿರ್ಲಾ ಸರ್ಕಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಚಾಕುವಳ್ಳಿ ಗ್ರಾಮಸ್ಥರ ನಡುವೆ ಹೊಡೆದಾಟ ನಡೆದಿದೆ.

ಜೆಡಿಎಸ್ ಕಾರ್ಯಕರ್ತರ  ಮನೆ ಮನೆಗೆ ಕುಮಾರಣ್ಣ ಚುನಾವಣಾ ಪ್ರಚಾರದ ವೇಳೆ ಈ ಘಟನೆ ನಡೆದಿದೆ. ಶಾಸಕ ಎಂ.ಟಿ ಕೃಷ್ಣಪ್ಪ ಬೆಂಬಲಿಗರಿಗೆ ಚಾಕುವಳ್ಳಿ ಗ್ರಾಮದ ಕೆಲವರು ಗ್ರಾಮದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದಕ್ಕೆ  ಆ ಗ್ರಾಮಸ್ಥರಿಗೆ  ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದಿದೆ.

ದಂಡಿನಶಿವರ ಪೊಲೀಸರು  ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 

ADVERTISEMENT

ಘಟನೆ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಬೆಂಬಲಿಗರ ದಬ್ಬಾಳಿಕೆ ಖಂಡಿಸಿ ಅಮ್ಮಸಂದ್ರ ಬಿರ್ಲಾ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.